ಮಂಡ್ಯ: ಮಂಡ್ಯದ ಸಿಲ್ವರ್ ಜುಬ್ಲಿ ಪಾರ್ಕ್ ಬಳಿ ದಸಂಸ ಒಕ್ಕೂಟ, ವಿವಿಧ ಸಂಘಟನೆಗಳು ಡಾ “ಬಿ ಆರ್ ಅಂಬೇಡ್ಕರ್ ರವರ ರಾಜಗೃಹದ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದವು.
144 ಸೆಕ್ಷನ್ ಆದೇಶ ಉಲ್ಲಂಘಿಸಿದ ಮಳವಳ್ಳಿ ಜೆಡಿಎಸ್ ಶಾಸಕ ಡಾ.ಕೆ.ಅನ್ನಧಾನಿ ಅವರು ಪ್ರತಿಭಟನೆಗೆ ಸಾಥ್ ನೀಡಿದರು.
ಪ್ರತಿಭಟನೆಯಲ್ಲಿ ಡಾ.ರವೀಂದ್ರ, ಸುನಂದಾ ಜಯರಾಂ, ದಲಿತಮುಖಂಡರಾದ ಲವ, ಅಂದಾನಿ ಸೋಮನಹಳ್ಳಿ, ಟಿ ಹರೀಶ್ ಕುಮಾರ್ ಉಪಸ್ಥಿತರಿದ್ದರು.