ಕೆಲವು ದಿನಗಳಿಂದ ವಿವಾದದ ಸುಳಿಯಲ್ಲಿ ಸಿಲುಕಿದ್ದ ದರ್ಶನ್ ಅವರು ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಸೊಮವಾರ ಬೆಳಗ್ಗೆ ಸಂಸದೆ ಸುಮಲತಾ ಮತ್ತು ಅಭಿಷೇಕ್ ಅಂಬರೀಷ್ ಜೊತೆ ದರ್ಶನ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ದರ್ಶನ್, ಅಭಿಷೇಕ್ ಮತ್ತು ಸುಮಲತಾ ಫೋಟೋ ವೈರಲ್ ಆಗಿದ್ದು, ಸ್ವತಃ ಸುಮಲತಾ ಅವರು ಈ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ತಿಂಗಳು ಕೇರಳದ ಶನಿದೇವರ ದರ್ಶನ ಪಡೆದ ದರ್ಶನ್ ಅವರು ಫೆಬ್ರವರಿಯಲ್ಲಿ ಉಮಾಪತಿ ಜೊತೆ ತಿರುಪತಿಗೆ ಬೇಟಿ ನೀಡಿದ್ದರು.