ಶಾಸಕರ ಭವನಕ್ಕೂ ವಕ್ಕರಿಸಿದ ಕೊರೋನಾ!

ಶಾಸಕರ ಭವನಕ್ಕೂ ವಕ್ಕರಿಸಿದ ಕೊರೋನಾ!

ಬೆಂಗಳೂರು : ವಿಕಾಸಸೌಧ, ವಿಧಾನಸೌಧ, ಸಿಎಂ ಗೃಹ ಕಚೇರಿ, ಸಚಿವರ ನಿವಾಸಕ್ಕೂ ಎಂಟ್ರಿ ಕೊಟ್ಟಿರುವ ಕೊರೋನಾ ಸೋಂಕು ಇದೀಗ ಶಾಸಕರ ಭವನಕ್ಕೂ ವಕ್ಕರಿಸಿದೆ.

ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಾರಕರೋಗ ಕೊರೋನಾ ಸೋಂಕು ಕಾಣಿಸಿಕೊಳ್ಳದ ಜಾಗ ಯಾವುದು ಎಂದು ಹುಡುಕುತ್ತ ಹೊರಟರೆ ಬಹುಶಃ ಅಂತಹ ಜಾಗ ಸಿಗೋದು ತುಂಬಾ ಕಷ್ಟಕರ. ಅಷ್ಟರಮಟ್ಟಿಗೆಎಲ್ಲೆಡೆ ತನ್ನ ಕದಂಬಬಾಹು ಚಾಚುತ್ತಿರುವ ಮಹಾಮಾರಿ ಕೊರೋನಾ ಶಾಸಕರ ಭವನದಲ್ಲಿ ಕಾರು ತೊಳೆಯುವ ವ್ಯಕ್ತಿಯಲ್ಲೂ ಕಾಣಿಸಿಕೊಂಡಿದೆ.

ಶಾಸಕರ ಭವನದಲ್ಲಿ ಶಾಸಕರ, ಸಚಿವರ ಮತ್ತು ಅಧಿಕಾರಿಗಳ ಕಾರು ತೊಳೆಯುತ್ತಿದ್ದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಭವನದಲ್ಲೂ ಹೈ ಅಲರ್ಟ್ ಮಾಡಲಾಗಿದೆ.

ವೈದ್ಯ, ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಸಿಬ್ಬಂದಿಗೂ ಕಾಡುತ್ತಿರುವ ಕೊರೋನಾ, ರಾಜ್ಯದ ವೈದ್ಯಕೀಯ ಸಚಿವ ಡಾ. ಸುಧಾಕರ್ ಸಂಸಾರಕ್ಕೂ ಕಂಟಕ ತಂದಿದೆ. ಸುಧಾಕರ್ ಅವರ ತಂದೆ, ಪತ್ನಿ, ಮಗಳಿಗೂ ಸೋಂಕು ತಗುಲಿದೆ. ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಅವರ ಪುತ್ರಿಗೂ ಸೋಂಕು ದೃಢಪಟ್ಟಿದೆ. ಈ ನಡುವೆ ಶಾಸಕರ ಭವನದಲ್ಲಿ ಕಾರು ತೊಳೆಯುವ ವ್ಯಕ್ತಿಗೂ ಸೋಂಕು ಬಂದಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.

Related