ಜಿಲ್ಲೆಗೆ ಭೇಟಿ ನೀಡಿದ ಸಿಎಂ

ಜಿಲ್ಲೆಗೆ ಭೇಟಿ ನೀಡಿದ ಸಿಎಂ

ಕಲಬುರಗಿ : ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರಿಸಲು ಹಾಗೂ ರೈತರಿಗೆ ಸಾಲ ವಿತರಿಸಲು ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಶನಿವಾರ ನಗರಕ್ಕೆ ಆಗಮಿಸಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಸುಸಜ್ಜಿತ ತರಕಾರಿ ಮಾರುಕಟ್ಟೆ ಸಂಕೀರ್ಣ ಕ್ಕೆ ಅಡಿಗಲ್ಲು ಹಾಗೂ ಲೋಕೋಪಯೋಗಿ ಇಲಾಖೆ ಲೋಕೋಪಯೋಗಿ ಭವನ ಉದ್ಘಾಟನೆ ನೆರವೇರಿಸುತ್ತಾರೆ.

ನಂತರ ಡಾ. ಎಸ್. ಎಂ ಪಂಡಿತ ರಂಗಮಂದಿರದಲ್ಲಿ ಡಿಸಿಸಿ ಬ್ಯಾಂಕ್‌ನ ವತಿಯಿಂದ ರೈತರಿಗೆ ನೀಡಲಾಗುವ 50 ಕೋಟಿ ರೂ. ಮೊತ್ತದ ಸಾಲ ವಿತರಣೆಗೆ ಚಾಲನೆ ನೀಡುತ್ತಿದ್ದಾರೆ.

ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ನಿಯಂತ್ರಣ ಕುರಿತಾಗಿ ಸಭೆ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಮುರುಗೇಶ ನಿರಾಣಿ, ಶ್ರೀ ರಾಮುಲು, ಬೈರತಿ ಬಸವರಾಜ್, ಎಸ್. ಟಿ.ಸೋಮಶೇಖರ ಮುಖ್ಯಮಂತ್ರಿ ಗಳಿಗೆ ಸಾಥ್ ನೀಡಿದರು.

Related