ಬೆಂಗಳೂರು: ಕನ್ನಡದ ಖ್ಯಾತ ಹಿರಿಯ ನಟಿ ಲೀಲಾವತಿಯವರು ನಿನ್ನೆ ಸಾಯಂಕಾಲ ನಿಧನರಾಗಿದ್ದಾರೆ. ಇಂದು ಸಾರ್ವಜನಿಕವಾಗಿ ಹಾಗೂ ಗಣ್ಯತಿ ಗಣ್ಯರಿಗೆ ಲೀಲಾವತಿಯವರ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ವೀರಭದ್ರ ಕಲಾಕ್ಷೇತ್ರದಲ್ಲಿ ತಂದಿರಿಸಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಲೀಲಾವತಿಯವರ ಅಂತಿಮ ದರ್ಶನ ಪಡೆದರು.
ಪಕ್ಷದ ಕೆಲ ಸದಸ್ಯರೊಂದಿಗೆ ನಗರದ ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರಕ್ಕೆ ಅಗಮಿಸಿದ ಸಿದ್ದರಾಮಯ್ಯ ಲೀಲಮ್ಮಗೆ ನಮ್ಮಸ್ಕರಿಸಿದ ಬಳಿಕ ತಮ್ಮನ್ನು ಕಂಡು ಎದ್ದು ಬರುವ ವಿನೋದ್ ರಾಜ್ ರನ್ನು ತಬ್ಬಿಕೊಂಡು ಸಂತೈಸುತ್ತಾರೆ. ತಾಯಿಯನ್ನು ಕಳೆದುಕೊಂಡು ಅಪಾರ ದುಃಖದಲ್ಲಿದ್ದರೂ ವಿನೋದ್, ಸಂಸ್ಕಾರ ಮರೆಯದೆ ಸಿದ್ದರಾಮಯ್ಯರ ಕಾಲು ಮುಟ್ಟಿ ನಮಸ್ಕರಿಸುತ್ತಾರೆ.