ಸ್ಪೋಟ ಸ್ಥಳಕ್ಕೆ ಸಿಎಂ ಭೇಟಿ : ಮೂವರು ಅರೆಸ್ಟ್

ಸ್ಪೋಟ ಸ್ಥಳಕ್ಕೆ ಸಿಎಂ ಭೇಟಿ : ಮೂವರು ಅರೆಸ್ಟ್

ಶಿವಮೊಗ್ಗ : ಹುಣಸೋಡು ಕಲ್ಲು ಕ್ವಾರಿ ಪ್ರದೇಶಕ್ಕೆ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಲಿದ್ದಾರೆ.

ಸ್ಫೋಟ ನಡೆದ ಸ್ಥಳದಲ್ಲಿ ಐವರ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಲಿರುವ ಸಿಎಂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ಶಿವಮೊಗ್ಗ ತಾಲೂಕಿನ ಹುಣಸೋಡುನಲ್ಲಿ ಸ್ಪೋಟ ಪ್ರಕರಣಕ್ಕೆ  ಸಂಬಂಧಿಸಿದಂತೆ  ಮೂವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುವುದು.  ಜಾಗ ಲೀಸ್‌ಗೆ ಪಡೆದಿದ್ದ ಸುಧಾಕರ್, ಪಾಲುದಾರ  ನರಸಿಂಹ  ಮತ್ತು  ಜಮೀನು  ಮಾಲೀಕ  ವಿನಯ್  ಕುಲಕರ್ಣಿ  ಅವರ  ವಿಚಾರಣೆ  ನಡೆಸಲಾಗುವುದು.
ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

Related