ಹಂಪಿಯಲ್ಲಿ ಕನ್ನಡ ಜ್ಯೋತಿರಥಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ಹಂಪಿಯಲ್ಲಿ ಕನ್ನಡ ಜ್ಯೋತಿರಥಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ವಿಜಯನಗರ: ಕರ್ನಾಟಕ ಎಂದು ನಾಮಕರಣಗೊಂಡು ನವಂಬರ್ 1ಕ್ಕೆ ಐವತ್ತು ವರ್ಷ ಪೂರೈಸಿದ ಹಿನ್ನೆಲೆ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ವಿಜಯನಗರ ಜಿಲ್ಲಾಡಳಿತ ಇವರ ನೇತೃತ್ವದಲ್ಲಿ ನವೆಂಬರ್ 2ರಂದು ವಿಶ್ವವಿಖ್ಯಾತ ಹಂಪಿಯ ಎದುರು ಬಸವಣ್ಣ ವೇದಿಕೆಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುವರು.

ಈ ಹಿಂದೆ 1973ಕ್ಕೆ ಮೊದಲು ಈಗಿನ ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದು ಪ್ರಚಲಿತದಲಿತ್ತು, ಇದಕ್ಕೆ ಕಾರಣ ಕರ್ನಾಟಕದ ಏಕೀಕರಣದ 1950ರಲ್ಲಿ 1956 ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು.

ಕರ್ನಾಟಕ ಎಂಬುದು ಕರು +ನಾಡು ಎಂಬುದರಿಂದ ಹುಟ್ಟು ಪಡೆದಿದೆ. ಕರುನಾಡು ಎಂದರೆ ಕಪ್ಪು ಮಣ್ಣಿನ ನಾಡು ಹಾಗೂ ಎತ್ತರ ಪ್ರದೇಶ ಎಂದು ಅರ್ಥ. ಈ 50ರ ಸಂಬಾರಂಭವನ್ನು ಆಚರಿಸಲು ಸಿಎಂ ಸಿದ್ದರಾಮಯ್ಯ ರಾಜ್ಯದ ಜನರೆಲ್ಲರೂ ನವಂಬರ್ 1ಕ್ಕೆ ತಮ್ಮ ಮನೆಗಳ ಮೇಲೆ ಕನ್ನಡದ ಬಾವುಟವನ್ನು ಆರಿಸಿ.

 

* ಮನೆಗಳ ಮುಂದೆ ರಾಜ್ಯೋತ್ಸವವನ್ನು ಬಿಂಬಿಸುವ ರಂಗೋಲಿಗಳನ್ನು ಹಾಕಿ.

 

* ರಾಜ್ಯೋತ್ಸವದ ದಿನದಂದು ರಾಜ್ಯದ ಎಲ್ಲಾ ಮನೆಗಳಲ್ಲಿ ಬೆಳಗ್ಗೆ 9 ಗಂಟೆಗೆ ನಾಡಗೀತೆಯ ಹಾಡು ಮೊಳಗಲಿ.

 

* ಸಂಜೆ 5:00 ಗಂಟೆಗೆ ನಿಮ್ಮ ನಿಮ್ಮ ಊರುಗಳ ಮೈದಾನದಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಗಾಳಿಪಟಗಳನ್ನು ಹಾರಿಸಿ.

 

* ಸಂಜೆ 7:00ಗೆ ನಿಮ್ಮ ಮನೆಗಳಲ್ಲಿ ಹಣತೆ ಹಚ್ಚಿ ಜ್ಯೋತಿ ಬೆಳಗಿಸಿ ಎಂದು ರಾಜ್ಯದ ಜನತೆಗೆಮನವಿ ಮಾಡಿದ್ದಾರೆ.

50ರ ಸಂಭ್ರಮದ ಉದ್ಘಾಟನೆ ಮತ್ತು ಕನ್ನಡ ಜ್ಯೋತಿರಥಕ್ಕೆ ಚಾಲನೆ ನೀಡುವರು.

 

ವಿಜಯನಗರ ಕ್ಷೇತ್ರದ ಶಾಸಕರಾದ ಹೆಚ್ಆರ್ ಗವಿಯಪ್ಪ ವೇದಿಕೆ ಅಧ್ಯಕ್ಷತೆಯನ್ನು ವಹಿಸುವರು. ಈ ಸಂಭ್ರಮಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ವಿಜಯನಗರ ಉಸ್ತುವಾರಿ ಸಚಿವ ಬಿ ಜಡ್ ಜಮೀರ್ ಅಹಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ,ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್ ಕೆ ಪಾಟೀಲ್, ಇತರರು ಭಾಗವಹಿಸುವರು.

Related