ಕೊರೋನಾ ಲಸಿಕೆ ವಿತರಣೆಗೆ ಸಿಎಂ ಚಾಲನೆ

ಕೊರೋನಾ ಲಸಿಕೆ ವಿತರಣೆಗೆ ಸಿಎಂ ಚಾಲನೆ

ಬೆಂಗಳೂರು :   ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಅವರು, ಕೊರೋನಾ ಲಸಿಕೆ ಅಭಿಯಾನಕ್ಕೆ ಚಾಲನೆ ರಾಜ್ಯದಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ನಾಗರತ್ನ ಅವರಿಗೆ ಮೊದಲ ಲಸಿಕೆ ನೀಡಲಾಯಿತು.

ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಗ್ರೂಪ್ ಡಿ ಸಿಬ್ಬಂದಿಯಾಗಿರುವ ಚಂದ್ರಶೇಖರ್ಗೂ ಲಸಿಕೆಯನ್ನು ನೀಡಲಾಯಿತು ನಂತರ ಅರ್ಧ ಗಂಟೆ ಕಾಲ ಅವರ ಮೇಲೆ ನಿಗಾ ವಹಿಸಲಾಗಿತ್ತು.

ನನಗೆ ಈ ಹಿಂದೆ ಕೊರೋನಾ ಬಂದು ಹೋಗಿತ್ತು, ಹಾಗಾಗಿ ಲಸಿಕೆ ಪಡೆದೆ, ನನ್ನೊಂದಿಗೆ ವೈದ್ಯರು ಇದ್ದಾರೆ, ಲಸಿಕೆ ಪಡೆಯುವುದಕ್ಕೆ ಯಾವುದೇ ಭಯ ಬೇಡ, ಭಯ ಪಡದೇ ಲಸಿಕೆ ಪಡೆಯಲು ಮುಂದೆ ಬನ್ನಿ ಎಂದು ಚಂದ್ರಶೇಖರ್ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

Related