ಬೆಂಗಳೂರು : ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರು ಖುದ್ದಾಗಿ ಹೆಚ್ಎಸ್ಆರ್ ಲೇಔಟ್ನ ಅಗರ ಕೆರೆಯ ಸುತ್ತಮುತ್ತ ಸ್ವಚ್ಛಗೊಳಿಸುವುದರ ಮೂಲಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.
ಶಾಸಕ ಸತೀಶ್ ರೆಡ್ಡಿ ಅವರು ತಮ್ಮ ಕಾರ್ಯಕರ್ತರ ಜೊತೆಗೂಡಿ ಕೆರೆಯ ಸುತ್ತಮುತ್ತ ಹಾಗೂ ರಸ್ತೆಯ ಅಕ್ಕಪಕ್ಕ ಹಾಕಿದ್ದ ಪ್ಲಾಸ್ಟಿಕ್ ಹಾಗೂ ನೀರಿನ ಬಾಟಲಿಗಳನ್ನು ತೆಗೆಯುವುದರ ಮೂಲಕ ಸ್ವಚ್ಛತಾ ಅಭಿಯಾನ ಕೈಗೊಂಡರು.
ಸ್ವಚ್ಛ ಸರ್ವೇಕ್ಷಣ ಕಾರ್ಯಕ್ರಮದ ಅಡಿ ಆಯೋಜಿಸಿದ್ದ ಅಭಿಯಾನದಲ್ಲಿ ಶಾಸಕ ಸತೀಶ್ ರೆಡ್ಡಿ ಜೊತೆ ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಸಿಂಗ್ ಹಾಗೂ ನಿವಾಸಿಗಳು, ಕಾರ್ಯಕರ್ತರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಅವರು, ಸಿಟಿಜನ್ ಫೋರಂ ಹಾಗೂ ಹೆಚ್ಎಸ್ಆರ್ನ ಎಲ್ಲಾ ಅಸೋಸಿಯೇಷನ್ನ ಸದಸ್ಯರು ಜೊತೆಗೂಡಿ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದೇವೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು, ನಮ್ಮ ಪರಿಸರವನ್ನು ಸ್ವಚ್ಛವಾಗಿಡಬೇಕು ಎಂಬ ನಿಟ್ಟಿನಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ.
ನಮ್ಮ ಹೆಚ್ಎಸ್ಆರ್ ಹಾಗೂ ಬೊಮ್ಮನಹಳ್ಳಿಯನ್ನು ಹಸಿರಾಗಿಡಬೇಕು ಎಂಬುದೇ ನಮ್ಮ ಈ ಅಭಿಯಾನದ ಗುರಿ. ಇಲ್ಲಿ ಸ್ವಚ್ಛತೆಗೆ ಪ್ರತಿದಿನ ಪ್ರಾಮುಖ್ಯತೆ ನೀಡುತ್ತಿರುವುದರಿಂದ ಬೊಮ್ಮನಹಳ್ಳಿ, ಹೆಚ್ಎಸ್ಆರ್ ಪ್ಲಾಸ್ಟಿಕ್ಮುಕ್ತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.