ಬಿಟಿಎಂ ಕ್ಷೇತ್ರ: ಕಾಂಗ್ರೆಸ್ ಬಿಜೆಪಿ ಮಾರಾಮಾರಿ

ಬಿಟಿಎಂ ಕ್ಷೇತ್ರ: ಕಾಂಗ್ರೆಸ್ ಬಿಜೆಪಿ ಮಾರಾಮಾರಿ

ಬೆಂಗಳೂರು: ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಶ್ರೀಧರ್‌ ರೆಡ್ಡಿ ಪರವಾಗಿ ಪ್ರಚಾರ ಮಾಡುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಪ್ರಚಾರ ಮಾಡುತ್ತಿರುವ ಸಂದರ್ಭದಲ್ಲಿ ಏಕಾಏಕಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಿರುವುದರಿಂದ ಬಿಜೆಪಿ ಕಾರ್ಯಕರ್ತರನ್ನು ಹೊಡೆದಿರುವ ಘಟನೆ ನಡೆದಿದ್ದು ಬಿಜೆಪಿ ಕಾರ್ಯ ಕರ್ತ ಹರೀನಾಥ ಓಬಿಸಿ ಮೋರ್ಚಾ ಬಿಜೆಪಿ ಅಧ್ಯಕ್ಷರು ಸುದ್ದಗುಂಟ್ಯಪಾಳ್ಯ ಹಲ್ಲೆಗೊಳಗಾದ ವ್ಯಕ್ತಿ.

ಇನ್ನು ಈ ಘಟನೆಯಲ್ಲಿ ತಲೆ ಹೊಡೆದಿರುವುದರಿಂದ ಅವರಿಗೆ ತುಂಬಾ ರಕ್ತ ಹೋಗಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ

ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಬಿಟಿಎಂಲೇಔಟ್ ನ ಒಂದನೇ ಹಂತದಲ್ಲಿ ನಡೆದ ಘಟನೆಯಾಗಿದ್ದು ಶ್ರೀಧರ್ ರೆಡ್ಡಿ ಪರ ಕ್ಯಾನ್ವಾಸ್ ಮಾಡುತಿದ್ದ ಕಾರ್ಯಕರ್ತರು, ಈ ವೇಳೆ ಎದುರಾದ ಕಾಂಗ್ರೆಸ್ ನವರ ಜೊತೆ ಮಾತಿನ ಚಕಮಕಿ ನಡೆದಿದ್ದು ಕಾಂಗ್ರೇಸ್ ಬೆಂಬಲಿಗರಿಂದ ಹಲ್ಲೆ ಆರೋಪ ಕೇಳಿಬಂದಿದೆ.

 

Related