ತಿರುಮಲದಲ್ಲಿ ಕರ್ನಾಟಕ ಭವನ; ಭೂಮಿಪೂಜೆ

ತಿರುಮಲದಲ್ಲಿ ಕರ್ನಾಟಕ ಭವನ; ಭೂಮಿಪೂಜೆ

ತಿರುಮಲ: ಇಲ್ಲಿ ನಿರ್ಮಾಣವಾಗುತ್ತಿರುವ ಸುಮಾರು 200 ಕೋಟಿ ವೆಚ್ಚದ ಯಾತ್ರಾರ್ಥಿಗಳ ಕರ್ನಾಟಕ ಭವನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ ಜಂಟಿಯಾಗಿ ಭೂಮಿ ಪೂಜೆ ನೆರವೇರಿಸಿದರು.

2008 ರಲ್ಲಿ ತಿರುಮಲ ತಿರುಪತಿ ದೇವಸ್ಥಾನವು ತಿರಮಲದಲ್ಲಿರುವ ಕರ್ನಾಟಕ ಚಾರೀಟೀಸ್‍ಗೆ 7.5 ಎಕರೆ ಭೂಮಿಯನ್ನು 50 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಿದೆ.

ಇದರಲ್ಲಿ 242 ಯಾತ್ರಿಕರ ಕೊಠಡಿಗಳು, 32 ಸೂಟ್ ರೂಂ ಗಳು, 12 ಡಾರ್ಮೆಟರಿಗಳು, ಕಲ್ಯಾಣ ಮಂಟಪ, ಭೋಜನ ಶಾಲೆಯೊಂದಿಗೆ ಪ್ರಸ್ತುತ ಇರುವ ಪುಷ್ಕರಣಿಯನ್ನು ಪುನರುಜ್ಜೀವನಗೊಳಿಸಲಾಗುವುದು.

Related