ಬಿಜೆಪಿಯ ಸರ್ವಾಧಿಕಾರ ಆಡಳಿತ ಅಂತ್ಯವಾಗಬೇಕು: ಕೆಹೆಚ್.ಮುನಿಯಪ್ಪ.

ಬಿಜೆಪಿಯ ಸರ್ವಾಧಿಕಾರ ಆಡಳಿತ ಅಂತ್ಯವಾಗಬೇಕು: ಕೆಹೆಚ್.ಮುನಿಯಪ್ಪ.

ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿಂದು ಮಾದಿಗ ಸಮುದಾಯದ ಮುಖಂಡರ ಸಮಾವೇಶವನ್ನು ಏರ್ಪಡಿಸಲಾಗಿದ್ದು ಈ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಅವರನ್ನು ಬೆಂಬಲಿಸಿ ಎಂದು ಆರೋಗ್ಯ ಸಚಿವ ಕೆಎಚ್ ಮುನಿಯಪ್ಪ ಅವರು ಹೇಳಿದ್ದಾರೆ.

ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯ ಸರ್ವಾಧಿಕಾರ ಆಡಳಿತ ಅಂತ್ಯವಾಗಬೇಕು. ಕಾಂಗ್ರೆಸ್ ಪಕ್ಷ ನನ್ನ ಮೇಲೆ ವಿಶ್ವಾಸ ವಿಟ್ಟು ಕೇಂದ್ರ ಸರ್ಕಾರದಲ್ಲಿ 10 ವರ್ಷಗಳ ಕಾಲ ಮಂತ್ರಿ ಮಾಡಿದೆ ರಾಜ್ಯ ಮಟ್ಟದಲ್ಲಿಯೂ ಸಚಿವನಾಗಿ ಕೆಲಸಮಾಡುತ್ತಿದ್ದೇನೆ.  ಕೇವಲ ಸೀಟಿನ ವಿಷಯದಲ್ಲಿ ನನಗೆ ಯಾವುದೇ ಮುನಿಸಿಲ್ಲಾ ಕೋಲಾರ ಕ್ಷೇತ್ರ ಸೇರಿ 28 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ. ಚಂದ್ರಪ್ಪ ಸರಳ ಸಜ್ಜನಿಕೆ ರಾಜಕಾರಣಿ ಅವರು ಜನರ ಸಮಸ್ಯಗಳನ್ನು ಅರಿತಿರುವ ನಾಯಕ. ಅವರನ್ನು ಅತಿಹೆಚ್ಚು ಮತಗಳಿಂದ ಗೆಲ್ಲಿಸಬೇಕೆಂದು ಜನರಲ್ಲಿ ಮನವಿ ಮಾಡಿದರು.

ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಗೆಲುವು ಚಿತ್ರದುರ್ಗ ಜಿಲ್ಲಾ ಕ್ಷೇತ್ರವಾಗಬೇಕು. ಭಾರತ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಎಲ್ಲಾ ಧರ್ಮದ ನಾಯಕರ ಹೋರಾಟದಿಂದ ಸಾಧ್ಯವಾಯಿತು. ದೇಶದಲ್ಲಿ ಶಾಂತಿ ನೆಲೆಸಬೇಕು. ಧರ್ಮ ಧರ್ಮಗಳ ನಡುವೆ ಭಿನ್ನಾಭಿಪ್ರಾಯ ಗಳನ್ನು ಉಂಟು ಮಾಡಬಾರದು. ಬಿಜೆಪಿ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನವನ್ನು ಈ ದೇಶದಲ್ಲಿ ಬದಲಾವಣೆ ಮಾಡಬೇಕು ಎಂದು ಹೋರಟಿದೆ, ಬಿಜೆಪಿಯ ಹಲವಾರು ನಾಯಕರು ಸಂವಿಧಾನ ಬದಲಾವಣೆಯ ಮಾತುಗಳನ್ನು ಹೇಳುತ್ತಿದ್ದಾರೆ .

ಈ ಸಂವಿಧಾನ ಉಳಿವಿಗಾಗಿ ಹಾಗೂ ದೇಶದ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು ಎಂದರು. ಗಾಂಧೀಜಿಯವರ ರಾಮ ರಾಜ್ಯದ ಕನಸನ್ನು ಕಂಡಿದ್ದರು ಅದನ್ನ ನನಸು ಮಾಡಲು ನಾವೆಲ್ಲಾರು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸಾದ್ಯ. ನಾವು ಜನಸಾಮಾನ್ಯರಿಗೆ ನೀಡಿರುವ ಯೋಜನೆಗಳು ಕಾರ್ನಾಟಕ ರಾಜ್ಯದ ಸುಮಾರ 4.5 ಕೋಟಿ ಜನರಿಗೆ ತಲುಪಿವೆ  ಭಾರತದಲ್ಲಿ ಜನಸಾಮಾನ್ಯರಿಗೆ ಇಷ್ಟು ಯೋಜನೆಗಳನ್ನು  ನೀಡಿರುವ ಮೊಟ್ಟ ಮೊದಲ ರಾಜ್ಯ ಕರ್ನಾಟಕ ವಾಗಿದೆ ಎಂದರು‌.

ಕೇಂದ್ರಕ್ಕೆ ನಾವು ಅಕ್ಕಿಯನ್ನು ಬೇಡಿಕೆ ಇಟ್ಟಿದ್ದಿವಿ FCI ನಿಗದಿಪಡಿಸಿದ ಧರ 34 ರೂಗಳನ್ನು ನೀಡುತ್ತೇವೆ ಅಕ್ಕಿ ಕೊಡಿ ಎಂದರೆ ಅವರು ನಿರಾಕರಿಸಿ ರಾಜಕೀಯ ಮಾಡಿದರು. ಕೇಂದ್ರ ದವರು 29 ರೂಗಳಿಗೆ ಭಾರತ್ ರೈಸ್ ನೀಡುತ್ತಿದ್ದಾರೆ ಅದು 10 ರೂಗಳನ್ನು  ಮಾರಾಟದ ಏಜೆಂಟ್ ಗೆ ಕಮಿಷನ್ ನೀಡಿ  ಸರ್ಕಾರದ ಬೊಕ್ಕಸಕ್ಕೆ ತುಂಬಾ ನಷ್ಟ ವನ್ನುಂಟು ಮಾಡುತ್ತಿದ್ದಾರೆ.

ಸುಮಾರು 10 ಲಕ್ಷ ಮೆಟ್ರಿಕ್ ಟನ್  ಅಕ್ಕಿ ಖರೀದಿಸಿ 1/2 ಧರಕ್ಕೆ ಜನರಿಗೆ ನೀಡಿ  ರಾಷ್ಟ್ರದ ಬೊಕ್ಕಸಕ್ಕೆ ತುಂಬಾ ನಷ್ಟು ವನ್ನುಂಟು ಮಾಡುತ್ತಿದ್ದಾರೆ. ಬಿಜೆಪಿಯವರು ಬರೀ ಅಧಿಕಾರದ ಆಸೆಗೆ ಅಷ್ಟೆ ಇವರು ಜನಸಾಮಾನ್ಯರ ಪರವಾಗಿದ್ದರೆ. ಬರಪರಿಹಾರದ ಹಣವವನ್ನು ನೀಡಬೇಕಿತ್ತು ಇವರು ಎಲ್ಲಾ ವಿಷಯದಲ್ಲಿಯೂ ರಾಜಕೀಯ ಮಾಡುತ್ತಾರೆ,

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್. ಆಂಜನೇಯ,ಓಶಂಕರ್,ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಾಜ್ ಪೀರ್,ಬಿಎಸ್ ಮಂಜುನಾಥ್, ಅಭ್ಯರ್ಥಿ ಬಿಎನ್ .ಚಂದ್ರಪ್ಪ  ಹಾಗೂ ದಲಿತ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Related