BSY: ನಮ್ಮ ಪಕ್ಷ ಬೆಳೆಸಿದ ಮಹಾನ್ ನಾಯಕ, ಅಗೌರವಿಸುವಂತಹ ಯಾವ ಪ್ರಶ್ನೆಯೂ ಇಲ್ಲ : ಆರಗ ಜ್ಞಾನೇಂದ್ರ

ತುಮಕೂರು ಮೇ 25 : ಪರಿಷತ್​ ಟಿಕೆಟ್​ ವಿಚಾರವಾಗಿ ವಿಜಯೇಂದ್ರ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಪಕ್ಷದ ಆದೇಶ, ಪಕ್ಷದ ನಿರ್ಣಯಕ್ಕೆ ನಾವೆಲ್ಲರೂ ತಲೆಬಾಗಲೇಬೇಕು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.


ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ನಮ್ಮ ಪಕ್ಷದ ಯುವ ನಾಯಕರು, ರಾಜ್ಯದ ಉಪಾಧ್ಯಕ್ಷರು. ಸದ್ಯ ವಿಧಾನಪರಿಷತ್ ಸ್ಥಾನಕ್ಕಿಂತ ಮೇಲಿದ್ದಾರೆ. ಅವರ ನಿರ್ಣಯ ಏನು ಅನ್ನೋದನ್ನ ಅವರೇ ಹೇಳಿದ್ದಾರೆ. ಒಬ್ಬರಿಗೆ ಟಿಕೆಟ್ ಕೊಡ್ಬೇಕು ಅಂದ್ರೆ ಪಕ್ಷದಲ್ಲಿ ಬಹಳಷ್ಟು ಜನ ಆಕಾಂಕ್ಷಿಗಳು ಇರ್ತಾರೆ. ಇದನ್ನು ಯೊಚನೆ ಮಾಡಿ ನಮ್ಮ ಹೈಕಮಾಂಡ್​ ನಿರ್ಣಯ ಮಾಡಿದೆ. ಇದು ವಿಜಯೇಂದ್ರ ಅವರಿಗೆ ಒಪ್ಪಿಗೆಯಿದೆಎಂದರು.

ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವ ಕುರಿತು ಪ್ರತಿಕ್ರಿಯಿಸಿ, ಅಂತದ್ದೇನು ಇಲ್ಲ, ಯಡಿಯೂರಪ್ಪನವರು ನಮ್ಮ ಮಹಾನ್ ನಾಯಕರು. ಪಕ್ಷ ಬೆಳೆಸಿದವರು, ನಾವು ಅವರನ್ನು ಯಾವತ್ತೂ ಅಗೌರವಿಸುವಂತಹ ಯಾವ ಪ್ರಶ್ನೆಯೂ ಇಲ್ಲ. ಟಿಕೆಟ್ ನಿರ್ಣಯ ಮಾಡಿದ್ದಾರೆ, ಬೇರೆ-ಬೇರೆ ಸಮುದಾಯಕ್ಕೆ ಟಿಕೆಟ್ ಹಂಚಿಕೆ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

Related