ಬೆಂಗಳೂರು: ₹12 ಲಕ್ಷ ಬೆಲೆಬಾಳುವ ರೇಷ್ಮೆ ಸೀರೆಗಳನ್ನು ಕದ್ದಿದ್ದ ಕದೀಮನೊಬ್ಬ ಯಶವಂತಪುರ ಪೊಲೀಸ್ ಠಾಣೆಯ ಅತಿಥಿಯಾಗಿದ್ದಾನೆ.
ಚಿಕ್ಕಬಾಣವಾರದ ಸಂಧ್ಯಾನಗರ ನಿವಾಸಿ ರವಿಪ್ರಕಾಶ್ (62) ಎಂಬಾತನೇ ರೇಷ್ಮೆ ಸೀರೆಗಳನ್ನು ಕದಿಯುತ್ತಿದ್ದ ಭೂಪ.
ದುಶ್ಚಟಗಳ ದಾಸನಾಗಿದ್ದ ರವಿಪ್ರಕಾಶ್ ಹಣಕ್ಕಾಗಿ ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಯಶವಂತಪುರ ಪೊಲೀಸರು ಆರೋಪಿಯಿಂದ 67 ಸೀರೆಗಳು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.