ಆದಿತ್ಯ ರಾವ್ ಆಸ್ಪತ್ರೆಗೆ ದಾಖಲು

ಆದಿತ್ಯ ರಾವ್ ಆಸ್ಪತ್ರೆಗೆ ದಾಖಲು

ಮಂಗಳೂರು, ಫೆ. 27 : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಆದಿತ್ಯ ರಾವ್ ಅಸೌಖ್ಯಕ್ಕೀಡಾಗಿದ್ದು, ಚಿಕಿತ್ಸೆಗೆ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಲೇರಿಯಾ ಜ್ವರದಿಂದ ಬಳಲುತ್ತಿರುವ ಆದಿತ್ಯ ರಾವ್, ಆಸ್ಪತ್ರೆಯಲ್ಲಿರುವ ಕೈದಿಗಳ ಸೆಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಾಗಾಗಿ ಗುರುತು ದೃಢೀಕರಣಕ್ಕಾಗಿ ಸಾಕ್ಷಿಗಳ ಮುಂದೆ ನಡೆಯಬೇಕಾಗಿದ್ದ ಪರೇಡ್ ಮುಂದೂಡಲಾಗಿದೆ.
ನ್ಯಾಯಾಧೀಶರ ಎದುರು ಹಾಜರುಪಡಿಸಿ, ಹೇಳಿಕೆ ದಾಖಲು ಮಾಡಿಸಲು ತನಿಖಾಧಿಕಾರಿಗಳು ನಿರ್ಧರಿಸಿದ್ದು, ಅದರಂತೆ ಮಂಗಳೂರು ತಹಸೀಲ್ದಾರ್ಗೆ ಪತ್ರ ಬರೆಯಲಾಗಿತ್ತು.

Related