ವ್ಯಕ್ತಿಯ ಅಪಹರಣ; ಕುಟುಂಬಸ್ಥರಲ್ಲಿ ಆತಂಕ

ವ್ಯಕ್ತಿಯ ಅಪಹರಣ; ಕುಟುಂಬಸ್ಥರಲ್ಲಿ ಆತಂಕ

ಶಹಾಪುರ : ತಾಲೂಕಿನ ಹೋತಪೇಠದ ತಾಂಡಾ ನಿವಾಸಿ ರೇವು ನಾಯಕ್ ರಾಠೋಡ್ (60) ಕಿಡ್ನಾಪ್ ಆಗಿದ್ದು, ಆರೋಪಿಗಳನ್ನು ಬಂಧಿಸುವಂತೆ ಪುತ್ರ ರಾಜು ರಾಠೋಡ್ ದೂರು ದಾಖಲಿಸಿದ್ದಾರೆ. ಈ ಕುರಿತು ತನಿಖೆ ಮುಂದುವರೆದಿದೆ ಎಂದು ಪಿಐ ಚೆನ್ನಯ್ಯ ಹಿರೇಮಠ ತಿಳಿಸಿದರು.

ಕೆಲಸದ ಹಿನ್ನೆಲೆ ರೇವು ನಾಯಕ್ ಊರಿನಿಂದ ಶಹಾಪೂರ ನಗರಕ್ಕೆ ಬಂದಾಗ ನಗರದ ಕುಂಬಾರ ಓಣಿ ಬಳಿ ಈ ಘಟನೆ ನಡೆದಿದೆ.

ಅಪಹರಣಕ್ಕೊಳಗಾದ ನಂತರ ನನ್ನನ್ನು ಯಾರೋ 10 ಜನ ಅಪಹರಣ ಮಾಡಿ ಕ್ರೂಸರ್ ವಾಹನದಲ್ಲಿ ಕೂರಿಸಿದ್ದಾರೆ ಎಂದು ರೇವು ನಾಯಕ್‌ನು ತನ್ನ ಮೊಬೈಲ್‌ನಿಂದ ಪುತ್ರನ ಮೊಬೈಲ್‌ಗೆ ಕರೆ ಮಾಡಿದ್ದಾರೆ.

ಇನ್ನೂ ಮಾಹಿತಿ ನೀಡುತ್ತಿರುವಾಗಲೇ ಮೊಬೈಲ್‌ನ್ನು ಕಸಿದುಕೊಂಡಿದ್ದಾರೆ. ಈಗಾಗೀ ಕುಟುಂಬಸ್ಥರು ಆತಂಕಕ್ಕಿಡಾಗಿದ್ದು, ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Related