ಬಲಗಾಲಿಗೆ ಫೋನ್ ಕಟ್ಟಿಕೊಂಡು ಮತ ಎಣಿಕೆಗೆ ಎಂಟ್ರಿ ಕೊಟ್ಟ ಯುವಕ

ಬಲಗಾಲಿಗೆ ಫೋನ್ ಕಟ್ಟಿಕೊಂಡು ಮತ ಎಣಿಕೆಗೆ ಎಂಟ್ರಿ ಕೊಟ್ಟ ಯುವಕ

ಉಡುಪಿ: ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಮೇ.10 ರಂದು ಭರ್ಜರಿಯಾಗಿ ನಡೆದಿದೆ. ಅದರಂತೆ ಇಂದು 224 ಕ್ಷೇತ್ರದ ಫಲಿತಾಂಶ ಬರಲಿದ್ದು, ಇಡೀ ರಾಜ್ಯವೇ ಕಾದು ನೋಡುತಿದೆ. ಅದರಂತೆ ಮತ ಎಣಿಕಾ‌ ಕೇಂದ್ರದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಲು ಅವಕಾಶವಿರುವಿದಿಲ್ಲ. ಆದರೂ ಇಲ್ಲೋಬ್ಬ ಭೂಪ ಪ್ಯಾಂಟ್ ಒಳಗೊಂದು, ಕಾಲಿಗೆ ಮೊತ್ತೊಂದು ಮೊಬೈಲ್ ಕಟ್ಟಿಕೊಂಡು ಬಂದಿದ್ದಾನೆ.

ಹೌದು, ಕಾಲಿಗೆ ಮೊಬೈಲ್ ಕಟ್ಟಿಕೊಂಡು ಮತ ಎಣಿಕೆ ಸೆಂಟರ್​ಗೆ ಎಂಟ್ರಿ ಕೊಡಲು ಕ್ಷೇತ್ರದ ಏಜೆಂಟ್ ಯತ್ನಿಸಿದ ಘಟನೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಪೊಲೀಸರ ಕಣ್ಣು ತಪ್ಪಿಸುವ ಯತ್ನ ವಿಫಲವಾಗಿದ್ದು ಏಜೆಂಟ್ ನನ್ನ ದ್ವಾರದಲ್ಲೇ ತಡೆಹಿಡಿದು ವಾಪಸ್ ಕಳಿಸಲಾಗಿದೆ. ಕೇಸರಿ ಶಾಲು ದಾರಿ ಯುವಕ ಬಲಗಾಲಿಗೆ ಫೋನ್ ಕಟ್ಟಿಕೊಂಡಿದ್ದ.

 

Related