ಅ. 7ಕ್ಕೆ ವಿಜಯನಗರ ಜಿಲ್ಲೆಗೆ ಕೇಂದ್ರದಿಂದ 2 ತಂಡಗಳು ಭೇಟಿ

  • In State
  • October 5, 2023
  • 141 Views
ಅ. 7ಕ್ಕೆ ವಿಜಯನಗರ ಜಿಲ್ಲೆಗೆ ಕೇಂದ್ರದಿಂದ 2 ತಂಡಗಳು ಭೇಟಿ

ಹೊಸಪೇಟೆ: ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಅ. 7 ಕ್ಕೆ (ಶನಿವಾರ) ವಿಜಯನಗರ ಜಿಲ್ಲೆಗೆ ಕೇಂದ್ರದಿಂದ ಎರಡು ತಂಡಗಳು ಆಗಮಿಸಲಿದ್ದು ರೈತರು ಈ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ತಿಳಿಸಿದ್ದಾರೆ.

ಇನ್ನು ರಾಜ್ಯಾದ್ಯಂತ 195 ತಾಲೂಕುಗಳನ್ನು ರಾಜ್ಯಸರ್ಕಾರ ಬರಪೀಡಿದ ಪ್ರದೇಶಗಳೆಂದು ಘೋಷಿಸಿದೆ. ಈ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ 6,000 ಕೋಟಿ ಸಹಾಯಧನಕ್ಕೆ ಮನವಿ ನೀಡಿ ಚರ್ಚಿಸಲಾಗಿತ್ತು. ಈ ಸಂಬಂಧ ಕೇಂದ್ರದಿಂದ ಮೂರು ತಂಡಗಳು 12 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

ಮಳೆ ಬಾರದೆ ಬರದಿಂದ ತತ್ತರಿಸಿ ಸಂಕಷ್ಟಕ್ಕೆ ಸಿಲುಕಿರುವ ರೈತನ ಕೃಷಿ ಭೂಮಿಗಳಿಗೆ ಕೇಂದ್ರದ ಐಎಎಸ್ ಅಧಿಕಾರಿಗಳ ಎರಡನೇ ತಂಡ ಶನಿವಾರ ವಿಜಯನಗರ ಜಿಲ್ಲೆಗೆ ಆಗಮಿಸಲಿದೆ. ಕೇಂದ್ರದಿಂದ 10 ಸದಸ್ಯರನ್ನು ಒಳಗೊಂಡಂತೆ ಸ್ಥಳೀಯ ಅಧಿಕಾರಿಗಳೊಂದಿಗೆ ಜಿಲ್ಲೆಯಾದ್ಯಂತ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಬರಬಡಿತಕ್ಕೆ ತುತ್ತಾಗಿರುವ ಅನ್ನದಾತ ಇದರಿಂದ ಸ್ವಲ್ಪ ಸುಧಾರಿಸಬಹುದು ಎನ್ನುವ ನಿರೀಕ್ಷೆಯಲ್ಲಿ ಬಕಪಕ್ಷಿಯಂತೆ ಕಾಯುತ್ತಿದ್ದಾನ

ವರದಿಗಾರ, ಎ ಚಿದಾನಂದ.

Related