ಹಗರಿಬೊಮ್ಮನಹಳ್ಳಿ : ಕೂಡಲಸಂಗಮದಿಂದ ಪಟ್ಟಣಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಆಗಮಿಸಿದ ಜಯಮೃತ್ಯುಂಜಯ ಸ್ವಾಮೀಜಿಗಳಿಗೆ ಶನಿವಾರ ಅದ್ಧೂರಿ ಸ್ವಾಗತ ಕೋರಲಾಯಿತು.
ಪಾದಯಾತ್ರೆಯು 10ನೇ ದಿನವಾದ ಶನಿವಾರ 235 ಕಿ.ಮೀ ದೂರ ಕ್ರಮಿಸಿದೆ.
ತಾಲೂಕಿನ ಹೊಸ ಆನಂದೇವನಹಳ್ಳಿಯಲ್ಲಿ ಶುಕ್ರವಾರ ತಂಗಿದ್ದ ಸ್ವಾಮೀಜಿ ಬೆಳಿಗ್ಗೆ 11 ಗಂಟೆಗೆ ಪಾದಯಾತ್ರೆ ಆರಂಭಿಸಿದರು.
ಈ ಸಂದರ್ಭದಲ್ಲಿ ಸಂಸದ ವೈ. ದೇವೇಂದ್ರಪ್ಪ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ, ಎಸ್. ಭೀಮನಾಯ್ಕ, ಮುಖಂಡರಾದ ವಿಜಯಾನಂದ ಕಾಶಪ್ಪನವರ್, ಬಾವಿ ಬೆಟ್ಟಪ್ಪ, ಕೆ. ನೇಮಿರಾಜನಾಯ್ಕ ಪಾಲ್ಗೊಂಡಿದರು.