ಬಿಜೆಪಿ ನಾಯಕರಿಗೆ ಗ್ರಾಮಸ್ಥರ ತರಾಟೆ!

ಬಿಜೆಪಿ ನಾಯಕರಿಗೆ ಗ್ರಾಮಸ್ಥರ ತರಾಟೆ!

ರಾಯಚೂರು : ಮಸ್ಕಿ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ ಬಿಜೆಪಿ ನಾಯಕರಿಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡ ಘಟನೆ ರಾಯಚೂರಿನ ಅಮಿನಗಡ ಹಾಗೂ ವಟಗಲ್‌ನಲ್ಲಿ ನಡೆಯಿತು.

ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಹಾಗೂ ಸಚಿವ ಶ್ರೀರಾಮುಲು ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. 5ಂ ಕಾಲುವೆ ಮಾಡಲು ಆಗಲ್ಲ ಎಂದಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಮನಕಲ್ಲೂರಿನಲ್ಲಿ ರೈತರು 134 ದಿನಗಳಿಂದ ಕಾಲುವೆಗಾಗಿ ಧರಣಿ ನಡೆಸುತ್ತಿದ್ದಾರೆ. ಒಂದು ದಿನವು ಭೇಟಿ ನೀಡಿದ ರಾಜಕೀಯ ನಾಯಕರು, ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರತಾಪಗೌಡರ ಪರವಾಗಿ ಮತ ಯಾಚನೆಗೆ ಬಂದಾಗ ಮುತ್ತಿಗೆ ಹಾಕಿದರು.

ನಮಗೆ ಯಾರು ನೀರಾವರಿ ಸೌಲಭ್ಯ ಕಲ್ಪಿಸುತ್ತಾರೆ ಅವರಿಗೆ ಮತ ಹಾಕುತ್ತೇವೆ. ನಾವಿಂದು ಉಪ್ಪು ನೀರು ಕುಡಿಯುತ್ತಿದ್ದೇವೆ. ನೀವು ಸಹ ಇದೇ ನೀರು ಕುಡಿದು ನೋಡಿ ನಮ್ಮ ಕಷ್ಟ ಗೊತ್ತಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.

Related