ಇಸ್ಲಾಮಾಬಾದ್: ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪಾಕ್ ಕ್ರಿಕೆಟಿಗ ಶಾಹೀದ್ ಆಫ್ರಿದಿ ಭಾರತದ ವಿರೋಧಿ ಆಗಿದ್ದರೂ ಈಗ ಇದೀಗ ಹಿಂದೂ ದೇವಾಲಯಗಳಿಗೆ ತೆರಳಿ ಬಡ ಜನರಿಗೆ ಅಗತ್ಯ ವಸ್ತುಗಳ ನೀಡುವ ಮೂಲಕ ಮೆಚ್ಚುಗೆ ಮಹಾಪೂರ ಹರಿದು ಬರುತ್ತಿದೆ.
ಕೊರೋನಾ ಸಾಂಕ್ರಾಮಿಕ ಆರಂಭಗೊಂಡಾಗಿನಿಂದ ಪಾಕಿಸ್ತಾನದ ಮಾಜಿ ಕ್ರಿಕೆಟ್ ಪಟು ಆಫ್ರಿದಿ ಸಂಕಷ್ಟದಲ್ಲಿರುವ ಬಡ ಜನರಿಗೆ ನೆರವಾಗುವ ಸೇವಾ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಇದೀಗ ಹಿಂದೂ ದೇವಾಲಯಕ್ಕೆ ತೆರಳಿ ಅಲ್ಲಿನ ಜನರಿಗೆ ಅಗತ್ಯ ವಸ್ತುಗಳನ್ನು ದಾನ ಮಾಡಿದ್ದಾರೆ. ಪಾಕಿಸ್ತಾನದ ಹಿಂದೂ ದೇವಾಲಯವೊಂದಕ್ಕೆ ತೆರಳಿದ ಅಫ್ರಿದಿ ತಮ್ಮ ಫೌಂಡೇಷನ್ ವತಿಯಿಂದ ಕೈಯಿಲಾದ ಸಹಾಯ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಇದೇ ಅಫ್ರಿದಿಯ ಚ್ಯಾರಿಟಿ ಫೌಂಡೇಷನ್ ಗೆ ಧನ ಸಹಾಯ ಮಾಡಲು ಕೋರಿ ಟೀಕೆಗೊಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.