ಸ್ಟಾರ್ಗಳ ಜೊತೆ ಟಗರು ಅಬ್ಬರದ ಪ್ರಚಾರ

ಸ್ಟಾರ್ಗಳ ಜೊತೆ ಟಗರು ಅಬ್ಬರದ ಪ್ರಚಾರ

ಮೈಸೂರು: ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರ ವರ ನಟ ದುನಿಯಾ ವಿಜಯ್ ಅವರು ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ನಟ ಲೂಸ್ ಮಾದ(ಯೋಗೇಶ್) ಮತ್ತು ಮಟಿ ನಿಶ್ಚಿಕಾ ನಾಯ್ಡು ಕೂಡ ಸಾಥ್ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದುನಿಯಾ ವಿಜಯ್ ಅವರು, ‘ನಾನು ಸಿದ್ದರಾಮಯ್ಯ ಅವರ ದೊಡ್ಡ ಅಭಿಮಾನಿ. ಅವರು ಇಂದಿರಾ ಕ್ಯಾಂಟಿನ್ ಸೇರಿದಂತೆ ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.

ಬಡವರ ಮೇಲಿನ ಅಭಿಮಾನ ಇರುವ ಸಿದ್ದರಾಮಯ್ಯ ಪರ ಪ್ರಚಾರ ನಡೆಸುತ್ತಿರುವುದು ನನಗೆ ಖುಷಿ ಇದೆ ಎಂದರು.

ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಂಕಿ ಜೊತೆ ಸರಸ ಆಡಲು ಸಾಧ್ಯವಿಲ್ಲ. ಜನರ ಪ್ರೀತಿ, ಅಭಿಮಾನ, ಅನುಕಂಪ ಎಲ್ಲ ಸೇರಿದರೆ ಅದೊಂದು ದೊಡ್ಡ ಅಗ್ನಿಜ್ವಾಲೆ. ಸಿದ್ದರಾಮಯ್ಯ ಅವರೇ ಬೆಂಕಿ, ಆದ್ದರಿಂದ ಅದರ ಎದುರು ನಿಲ್ಲೋಕಾಗಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಕ್ಷೇತ್ರದ ಜನತೆಯ ಪ್ರೀತಿ ಆಶೀರ್ವಾದದಿಂದ ಸಿದ್ದು ದೊಡ್ಡ ಅಗ್ನಿ ಜ್ವಾಲೆಯಾಗಿದ್ದಾರೆ. ಬಡವ ಶ್ರೀಮಂತರ ರೀತಿಯಂತೆ ಬದುಕಬೇಕೆಂದು ಸಿದ್ದರಾಮಯ್ಯರ ಕನಸಾಗಿದೆ. ರೈತರ ಪರ ಇರುವ ಏಕೈಕ ಮಹಾನ್ ನಾಯಕ ಎಂದರೆ ಅದು ಸಿದ್ದರಾಮಯ್ಯ ಎಂದು ದುನಿಯಾ ವಿಜಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದಾರೆ.

Related