ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಕಾಲೇಜು ಒಂದರಲ್ಲಿ ಕೊಲೆಗೀಡಾದ ನೇಹಾ ಹಿರೇಮಠ ಅವರ ಮನೆಗೆ ರಾಜ್ಯ ನಾಯಕರುಗಳು ಮಾತ್ರವಲ್ಲದೆ ರಾಷ್ಟ್ರ ನಾಯಕರುಗಳು ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಅದರಂತೆ ನೇಹಾ ಹಿರೇಮಠ ಅವರ ಕುಟುಂಬಕ್ಕೆ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿ ನೀಡಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸುರ್ಜೇವಾಲಾ, ನೇಹಾ ಸಾವು ನಮ್ಮೆಲ್ಲರ ಮನದಲ್ಲಿದೆ. ನೇಹ ನಗುಮೊಗದ ಹುಡುಗಿ. ನೇಹಾ ಒಂದು ಹೂವಿನ ಮೃದು ಸ್ವಭಾವದ ಹುಡುಗಿ ಎಂದು ನಿಹಾರನ್ನು ಕೊಂಡಾಡಿದ್ದಾರೆ.
ಇನ್ನು ನೇಹಾ ಹಿರೇಮಠ ಅವರಗಾಗಿರುವ ಅನ್ಯಾಯವನ್ನು ನಾವು ಖಂಡಿಸುತ್ತೇವೆ. ಅವರ ಕುಟುಂಬದವರಿಗೆ 90 ದಿನಗಳೊಳಗಾಗಿ ನಮ್ಮ ಸರ್ಕಾರ ನ್ಯಾಯ ಒದಗಿಸುತ್ತದೆ ಎಂದು ನೇಹಾ ತಂದೆ ನಿರಂಜನ್ ಅವರಿಗೆ ಭರವಸೆ ನೀಡಿದ್ದಾರೆ
ನೇಹಾ ಕರ್ನಾಟಕದ ಮಗಳು. ನಾವೆಲ್ಲರೂ ಆಕೆಯ ಕುಟುಂಬದ ಜೊತೆಗಿದ್ದೇವೆ. ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸುತ್ತೇವೆ, ಇದಕ್ಕಾಗಿ ಸರ್ಕಾರ ಈಗಾಗಲೇ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿದೆ ಎಂದರು.
ಈ ಸಂದರ್ಭದಲ್ಲಿ ಕಾನೂನು ಸಚಿವರಾಗಿರುವಂತಹ ಎಚ್ ಕೆ ಪಾಟೀಲ್, ಕಾರ್ಮಿಕ ಸಚಿವರಾಗಿರುವಂತಹ ಸಂತೋಷ್ ಲಾಡ್ ಸಲೀಂ ಅಹಮದ್ ಖಾನ್, ಸೇರಿದಂತೆ ಇನ್ನಿತರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಹುಬ್ಬಳ್ಳಿ ಪೊಲೀಸ್ ಅಧಿಕಾರಿಗಳು ಜೊತೆಗಿದ್ದರು.
ನೇಹಾ ಹಿರೇಮಠ್ ನಮ್ಮ ಮಗಳು ನಮ್ಮ ಕರ್ನಾಟಕದ ಮಗಳು
ಇಂದು ಹುಬ್ಬಳ್ಳಿಯಲ್ಲಿರುವ ನೇಹಾರವರ ಮನೆಗೆ ಭೇಟಿ ನೀಡಿ ಅವರ ತಂದೆ ಶ್ರೀ ನಿರಂಜನ ಹಿರೇಮಠ, ಅವರ ತಾಯಿ, ಸಹೋದರ ಹಾಗೂ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ನೇಹಾರವರ ಸಾವಿಗೆ ನನ್ನ ಸಂತಾಪ ಸೂಚಿಸಿದೆ.
ಈ ಸಂದರ್ಭದಲ್ಲಿ ನನ್ನೊಂದಿಗೆ ಕಾನೂನು ಸಚಿವರಾದ ಎಚ್.ಕೆ.ಪಾಟೀಲ್, ಜಿಲ್ಲಾ ಉಸ್ತುವಾರಿ… pic.twitter.com/Li2p2hVs52
— Randeep Singh Surjewala (@rssurjewala) April 24, 2024