ಬೆಂಗಳೂರು ಮಾಲೀಕರ ಸಂಘದಿಂದ ಸೌಮ್ಯ ರೆಡ್ಡಿಗೆ ಬೆಂಬಲ

ಬೆಂಗಳೂರು ಮಾಲೀಕರ ಸಂಘದಿಂದ ಸೌಮ್ಯ ರೆಡ್ಡಿಗೆ ಬೆಂಬಲ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು ಎಲ್ಲಾ ಪಕ್ಷದ ಅಭ್ಯರ್ಥಿಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಬೆಂಗಳೂರು ಮಾಲೀಕರ ಸಂಘದ ವತಿಯಿಂದ ಸಭೆ ಮಾಡಿ, ಬೆಂಗಳೂರು ಮಾಲೀಕರ ಸಂಘದ ವತಿಯಿಂದ ಸೌಮ್ಯ ರೆಡ್ಡಿ ಅವರಿಗೆ ಬೆಂಬಲಿಸುವುದಾಗಿ ಹೇಳಿದ್ದಾರೆ.

ನಗರದಲ್ಲಿಂದು ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿ , ಸೌಮ್ಯರೆಡ್ಡಿರವರ ಪರ ಬೆಂಗಳೂರು ಮಾಲೀಕರ ಸಂಘದ ವತಿಯಿಂದ ಬೆಂಬಲ ನೀಡುವುದಾಗಿ ಹೇಳಿದರು

ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು, ಮಾಜಿ ಮಹಾಪೌರರಾದ ಮಂಜುನಾಥ್ ರೆಡ್ಡಿ,ಹೋಟೆಲ್ ಸಂಘದ ಅಧ್ಯಕ್ಷರಾದ ಪಿ.ಸಿ.ರಾವ್, ಸ್ವಾತಿ ಗ್ರೂಪ್ ಹೋಟೆಲ್ ಜಿ.ಕೆ.ಶೆಟ್ಟಿ, ಕದಂಬ ರಾಘವೇಂದ್ರರಾವ್, ಮಾಜಿ ಬಿಬಿಎಂಪಿ ಸದಸ್ಯರಾದ ಜಿ.ಮಂಜುನಾಥ್,ಬಂಟ್ಸ್ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಶೆಟ್ಟಿ, ವಿ.ಎಸ್.ಗಾರ್ಡ್ನನ್ ಮಾಲೀಕರಾದ ವೀರಪ್ಪ,  ಹೋಟೆಲ್ ಉದ್ಯಮಿ ಕೊರ್ಗೀ ಗೋಪಾಲ್ ಶೆಟ್ಟಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಶಂಕರ್ ಶೆಟ್ಟಿರವರು ಭಾಗವಹಿಸಿದ್ದರು.

Related