ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಬೆಂಬಲಿಸಲು ಕರೆ

ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಬೆಂಬಲಿಸಲು ಕರೆ

ಬೆಂಗಳೂರು:  ರಾಜ್ಯದ ಅಸ್ಥಿತ್ವನ್ನು ದೇಶದ ಭವಿಷ್ಯವನ್ನು ಜನಸಾಮಾನ್ಯರ ಬದುಕನ್ನು, ಉಳಿವನ್ನು ತೀಮಾಣಿಸಲಿರುವ ಅತೀ ಮಹತ್ವದ ಲೋಕಸಭಾ ಚುನಾವಣೆಗೆ ನಮ್ಮ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಸಮಿತಿಯ ತೀರ್ಮಾನದಂತೆ ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ನೀಡಲು ರಾಜ್ಯದ ಜನತೆಗೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ.ಎಂ.ರಾಮಚಂದ್ರಪ್ಪ ರವರು ಕರೆ ನೀಡಿದರು.

ನಗರದ ಮೌರ್ಯ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜನವಿರೋಧಿ, ರಾಜ್ಯಾವಿರೋಧಿ, ಸಂವಿದಾನ ವಿರೋಧ, ಸುಲಿಗೆಕೋರ, ಸರ್ವಾಧಿಕಾರಿ, ಬಿ.ಜೆ.ಪಿ. ಸರ್ಕಾರಕ್ಕೆ ಪಾಠ ಕಲಿಸೋಣ. ಈ ಮಹಾ ಕಾಯಕಕ್ಕೆ ಇಂದು ದೇಶದಾದ್ಯಂತ ಸಾವಿರಾರು ಸಂಘಟನೆಗಳು, ತೊಡಗಿಸಿಕೊಂಡಿದ್ದಾರೆ. ಲಕ್ಷಾಂತರ ಕಾರ್ಯಕರ್ತರು ಮಹತ್ವಾದ ಕೆಲಸದಲ್ಲಿ ನೀವು ಕೈ ತೊಡಿಸಲೇಬೇಕೆಂಧು ತಮ್ಮನ್ನು ಪ್ರೀತಿ ಪೂರ್ವಕವಾಗಿ ಆಗ್ರಹಿಸುತ್ತಿದ್ದೇವೆ. ದೇಶಕ್ಕಾದ ಮಹಾವಂಚನೆಯನ್ನು ಜನಮಾನಸಕ್ಕೆ ತಲುಪಿಸೋಣ ಮತ್ತೆ ಈ ಶಕ್ತಿಗಳು ಅಧಿಕಾರ ಕಬಳಿಸಿದಂತೆ ನೋಡಿಕೊಳ್ಳೋಣ ಯಾರೆ ಅಧಿಕಾರಕ್ಕೆ ಬಂದರೂ ಅವರ ಜೊತೆ ಗುದ್ದಾಟ ನಡೆಸುತ್ತಾ ಜನಹಿತವನ್ನು ಸಂರಕ್ಷಿಸೋಣ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಇಂದೂದರ್ ಹೋನ್ನಾಪೂರ್ ,ಸಂಚಾಲಕರಾದ ಅನಂತನಾಯಕ್, ಎಣ್ಣೆಗೆರೆ.ಆರ್.ವೆಂಕಟರಾಮಯ್ಯ, ಆದರ್ಶ ಯಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.

Related