ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ- ಸಮಲತಾ ಸ್ಪಷ್ಟನೆ.

ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ- ಸಮಲತಾ ಸ್ಪಷ್ಟನೆ.

ಮಂಡ್ಯ, ಜೂ 28 :  ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ಹಾಗೆಯೇ ಮಂಡ್ಯ ಕೂಡ ನನ್ನ ಬಿಡಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರೂ ಈ ರೀತಿ ಮಾತನಾಡಿರೆ ಅದು ಹಗಲು ಕನಸು. ಮಂಡ್ಯ ಬಿಟ್ಟು ಹೋಗಲಿ ಅನ್ನೋ ಆಸೆ, ಕನಸು ಇದ್ಯೇನೋ ಗೊತ್ತಿಲ್ಲ. ಅವರವರು ಈ ರೀತಿ ಸೃಷ್ಟಿ ಮಾಡಿ  ನನ್ನ ಮೇಲೆ ಅಪಪ್ರಚಾರ ಮಾಡ್ತಿದ್ದಾರೆ. ಇನ್ನೇನು ಅಸೆಂಬ್ಲಿ ಚುನಾವಣೆ ಹತ್ತಿರ ಬರುತ್ತಿದೆ. ಒಬ್ಬೊರಿಗೆ ಒಂದು ವಿಷಯಬೇಕು ಒಬ್ಬರನ್ನು ಟಾರ್ಗೆಟ್ ಮಾಡುವುದೇ ಇವರ ಸಾಧನೆ.

ಇವತ್ತಿಂದಲ್ಲ ಹಿಂದಿನಿಂದಲು ನಡೆದುಕೊಂಡು ಬಂದಿದೆ. ನನ್ನನ್ನು ಟಾರ್ಗೆಟ್ ಮಾಡಿದ್ರೆ ಅವರಿಗೆ ಪ್ರಚಾರ ಸಿಗುತ್ತೆ. ಏನು ನನ್ನ ಟಾರ್ಗೆಟ್ ಮಾಡಿ, ಸಾಧನೆ ಮಾಡಿದಾಗೆ ಫೀಲ್ ಆಗ್ತಿದ್ದಾರೆ. ಅದು ತಪ್ಪು. ಅವರಿಗೆಲ್ಲ ಎನು ಉತ್ತರ ಕೊಡಬೇಕು ಜನರು ಕೊಡ್ತಾರೆ, ಇಂತಹ ವಿಚಾರಕ್ಕೆ ನಾನು ತಲೆ ಕೆಡಿಕೊಳ್ಳುವುದಿಲ್ಲ. ಭ್ರಷ್ಟಾಚಾರದಲ್ಲಿರುವವರಿಗೆ ಈ ರೀತಿ ಭಯ ಇದೆ. ನನಗೆ ಯಾವುದೇ ಭಯವಿಲ್ಲ. ಜನ ಇಷ್ಟಪಟ್ಟಿದ್ದಾರೆ, ನಾನು ಇದ್ದೇನೆ. ಈಸುಳ್ಳು , ಅಪಪ್ರಚಾರ, ಜಗಳ ಮಾಡೋದು ಚೀಪ್ ಲೆವೆಲ್ ರಾಜಕಾರಣ ಎಂದರು.

ಪ್ರತಾಪ್ ಸಿಂಹ ಮತ್ತು ಸುಮಲತಾ ನಡುವೆ ಕೋಲ್ಡ್ ವಾರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಏನು ಕೊಲ್ಡ್ ವಾರ್ ಇಲ್ಲ, ಅವರ ಕೆಲಸ ಅವರು ಮಾಡಲಿ. ನನಗೆ ಯಾರ ಮೇಲೂ ಕೋಲ್ಡ್ ವಾರ್ ಇಲ್ಲ. ನನಗೆ ಕ್ರೆಡಿಟ್ ತೆಗೆದುಕೊಳ್ಳುವ ಅನಿವಾರ್ಯವೂ‌ ಇಲ್ಲ. ಎಲ್ಲಾ ಕೆಲಸವನ್ನು ಅವರೇ ಮಾಡಿಸುತ್ತಿದ್ದಾರೆ ಅಂದ್ರು ನಂಗೆ ಬೇಸರ ಇಲ್ಲ. ಹೆದ್ದಾರಿ ವಿಚಾರದಲ್ಲಿ ನಮ್ಮ ಜನರಿಗೆ ತೊಂದರೆಯಾದರೆ ನಾನು ಹೋರಾಟ ಮಾಡುತ್ತೇನೆ. ನನ್ನಿಂದ ಯಾವುದೇ ಕಾಮಗಾರಿಗಳು ಡಿಲೇ ಆಗಿಲ್ಲ. ಕೆ.ಹೆಚ್‌.ಬಿ ಕಾಲೋನಿ ರಸ್ತೆಯ ಬಗ್ಗೆ ಈ ಹಿಂದೆ ಅಧಿಕಾರಿಗಳಿಗೆ ಹೇಳಿದ್ದೆ.

ದಿಶಾ ಸಭೆಯಲ್ಲಿ ಈ ರಸ್ತೆ ಸರಿ ಪಡಿಸಲು ಸೂಚನೆ ನೀಡಿದ್ದೆ. ಆ ಕಾಮಗಾರಿ ಪೂರ್ಣವಾಗುವಾಗ ಅವರು ಅಲ್ಲಿಗೆ ಬಂದಿದ್ದಾರೆ. ಅಲ್ಲಿ ಹೋಗಿ ಫೋಟೋ ತೆಗೆಸಿಕೊಂಡು‌ ಹಾಕುವುದರಿಂದ ಏನೂ ಆಗಲ್ಲ. ಅವರಿಂದಲೇ ಕೆಲಸ ಆಯ್ತು ಅಂದ್ರೆ ನಾನು ಏನು ಮಾಡೋಕೆ ಆಗಲ್ಲ. ನಾನು ಎಲ್ಲವನ್ನೂ ಫೋಟೋ ತೆಗೆದುಕೊಂಡು, ಮೀಡಿಯಾ ಮುಂದೆ ಬರೋಕು ಆಗಲ್ಲ. ಬರೀ ಮೀಡಿಯಾ ಮುಂದೆ ಬಂದು ಕೂತ್ರೆ ಕೆಲಸ ಆಗಲ್ಲ ಎಂದು ಪ್ರತಾಪ್​ ಸಿಂಹಗೆ ಟಾಂಗ್​ ನೀಡಿದರು.

 

 

Related