ಸಿದ್ದರಾಮಯ್ಯನ ಹೇಳಿಕೆ ಸುಪ್ರೀಂ ಆದೇಶಕ್ಕೆ ವಿರುದ್ಧ ; ಸಿಎಂ

ಸಿದ್ದರಾಮಯ್ಯನ ಹೇಳಿಕೆ ಸುಪ್ರೀಂ ಆದೇಶಕ್ಕೆ ವಿರುದ್ಧ ; ಸಿಎಂ

ಶಿವಮೊಗ್ಗ : ರಾಮಮಂದಿರ ಬೇರೆಡೆ ನಿರ್ಮಿಸಲು ದೇಣಿಗೆ ನೀಡುತ್ತೇನೆ ಎಂಬ ವಿಪಕ್ಷ ನಾಯಕರ ಹೇಳಿಕೆ ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ಧವಾದದ್ದು ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ಮಾಚೇನಹಳ್ಳಿ ಕೈಗಾರಿಕೆಗಳ ಸಂಘದ ರಜತ ಮಹೋತ್ಸವ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಯಾರನ್ನೂ ಒತ್ತಾಯ ಮಾಡುತ್ತಿಲ್ಲ. ಜನರೇ ಜಾತಿ, ಧರ್ಮ, ಭೇದ ವಿಲ್ಲದೇ ನೀಡುತ್ತಿದ್ದಾರೆ ಎಂದರು.

ಇದರ ಬಗ್ಗೆ ಸಲ್ಲದ ಹೇಳಿಕೆ ನೀಡುವ ಮೂಲಕ ಕಲ್ಲು ಹಾಕಿ ಗೊಂದಲ ಸೃಷ್ಟಿ ಮಾಡಬೇಡಿ. ರಾಮ ಮಂದಿರದ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದು ರಾಜ್ಯ, ದೇಶ ಮತ್ತು ನಿಮಗೂ ಒಳ್ಳೆಯದಲ್ಲ ಎಂದು ಸಿದ್ದರಾಮಯ್ಯ, ಕುಮಾರಸ್ವಾಮಿಗೆ ಪರೋಕ್ಷ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾಚೇನಹಳ್ಳಿ ಕೈಗಾರಿಕಾ ವಲಯದ ಉದ್ಯಮಿಗಳು, ಕಾರ್ಮಿಕರ ವತಿಯಿಂದ ರಾಮಮಂದಿರ ನಿರ್ಮಾಣಕ್ಕೆ 70 ಲಕ್ಷ ರೂ. ದೇಣಿಗೆ ಸಿಎಂ ಮೂಲಕ ಸಲ್ಲಿಸಲಾಯಿತು.

Related