ಗಾರ್ಮೆಂಟ್ಸ್ ಗಳಲ್ಲಿ ಸತೀಶ್ ರೆಡ್ಡಿ ಮತಯಾಚನೆ

ಗಾರ್ಮೆಂಟ್ಸ್ ಗಳಲ್ಲಿ ಸತೀಶ್ ರೆಡ್ಡಿ ಮತಯಾಚನೆ

ಬೆಂಗಳೂರು: ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಎಂ ಸತೀಶ್ ರೆಡ್ಡಿ ಅವರು ಬೊಮ್ನಳ್ಳಿ ವಿಭಾಗದಲ್ಲಿ ಬರುವಂತಹ ಗಾರ್ಮೆಂಟ್ಸ್ ಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ ಸತೀಶ್ ರೆಡ್ಡಿ ಅವರು, ನಮ್ಮ ಸುತ್ತಮುತ್ತಲ ಗಾರ್ಮೆಂಟ್ಸ್ ಪರವಾಗಿ ನಾವು ಹಿಂದೆನೂ ಸಾಕಷ್ಟು ಕೆಲಸವನ್ನು ಮಾಡಿದ್ದೇವೆ ಮುಂದೇನು ಸಹ ಸಾಕಷ್ಟು ಅಭಿವೃದ್ಧಿಕೆಲಸಾಗಳನ್ನು ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಸರ್ಕಾರದಿಂದ ಏನೆಲ್ಲಾ ಸೌಲಭ್ಯ ಗಾರ್ಮೆಂಟ್ಸ್ ಜನರಿಗೆ ಒದಗಿಸಬೇಕು ಆ ಎಲ್ಲಾ ಸೌಕರ್ಯವನ್ನು ನಾನು ಒದಗಿಸುತ್ತಾ ಬಂದಿದ್ದೇನೆ.

ಯಾರಲ್ಲ ಬಡುವವರಿದ್ದಾರೋ ಅವರಿಗೆಲ್ಲ ಬಟ್ಟೆ ಹೊಲಿಯುವ ಯಂತ್ರ, ಲ್ಯಾಪ್ಟಾಪ್, ಐ ಪ್ಯಾಡ್ ಕೊಡಿಸುವಂತ ಕೆಲಸ ನಾವು ಹಿಂದೆ ಮಾಡಿದ್ದೇವೆ.

ಐಟಿ ಬಿಟಿ ಹಬ್ ಆಗಿರುವಂತಹ ಬೊಮ್ಮನಹಳ್ಳಿ ವಿಭಾಗದಲ್ಲಿ ಬಿಡ ವಿದ್ಯಾರ್ಥಿಗಳಿಗೆ ನಾನು ಸಾಕಷ್ಟು ಸಹಾಯ ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸುತ್ತೇನೆ.

ಇನ್ನು ಬೊಮ್ಮನಹಳ್ಳಿ ಸುತ್ತ ಮುತ್ತ ಹೆಚ್ಚು ಟ್ರಾಫಿಕ್ ಇರುವುದರಿಂದ ಈಗಾಗಲೇ ಮೆಟ್ರೋ ಕಾಮಗಾರಿ ಪ್ರಾರಂಭವಾಗಿದ್ದು, 90ರಷ್ಟು ಪೂರ್ತಿಯಾಗಿದ್ದು ಸಿಲ್ಕ್ ಬೋರ್ಡ್ ಇಂದ ನಾರಾಯಣ ಹೃದಯಾಲಯದ ವರೆಗೂ 90% ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು,ಇನ್ನು ಕೆಲವೇ ತಿಂಗಳಗಳಲ್ಲಿ ಮೆಟ್ರೋ ಕಾಮಗಾರಿ ಸಂಪೂರ್ಣ ವಾಗುತ್ತದೆ ಎಂದು ಈ ಸಂದರ್ಭದಲ್ಲಿ ಸತೀಶ್ ರೆಡ್ಡಿ ಅವರು ತಿಳಿಸಿದರು.

Related