ನರೇಂದ್ರ ಮೋದಿ ಅವರ 70ನೇ ಹುಟ್ಟುಹಬ್ಬವನ್ನು ಆಚರಿಸಿದ -ಎಂ.ಸತೀಶ್ ರೆಡ್ಡಿ

ನರೇಂದ್ರ ಮೋದಿ ಅವರ 70ನೇ ಹುಟ್ಟುಹಬ್ಬವನ್ನು ಆಚರಿಸಿದ -ಎಂ.ಸತೀಶ್ ರೆಡ್ಡಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಭಾರತ ದೇಶದ ಬಗ್ಗೆ ಎಲ್ಲೆಡೆ ದುಪ್ಪಟ್ಟು ಗೌರವ ಸಂಪಾದಿಸಿಕೊಟ್ಟಂತಹ ಶ್ರಮಜೀವಿ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರು ಮೋದಿ ಅವರ ಕಾರ್ಯವೈಖರಿಯನ್ನು ಹೊಗಳಿದರು.

ನರೇಂದ್ರ ಮೋದಿ ಅವರ 70ನೇ ಹುಟ್ಟುಹಬ್ಬವನ್ನು ರಕ್ತದಾನ ಶಿಬಿರ, ಸಸಿನೆಡುವ ಕಾರ್ಯಕ್ರಮ, ಸ್ವಚ್ಛತಾ ಕಾರ್ಯ ಹೀಗೆ ವಿಭಿನ್ನ ಕಾರ್ಯಕ್ರಮಗಳ ಮೂಲಕ ಸರಳವಾಗಿ, ಹಲವಾರು ಸೇವಾಕಾರ್ಯದ ಮೂಲಕ ಅರ್ಥಪೂರ್ಣವಾಗಿ, ವಿನೂತನವಾಗಿ ಬೊಮ್ಮನಹಳ್ಳಿಯಲ್ಲಿ ಗುರುವಾರ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ಕಳೆದ ಆರು ವರ್ಷಗಳಿಂದ ದೇಶದ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಶ್ರಮಜೀವಿಯಾದ ಮೋದಿ ಅವರ ಬಗ್ಗೆ ಅಪಾರ ಗೌರವವಿದೆ. ಕೊರೋನಾ ವೈರಸ್‌ನಂತಹ ಸಂಕಷ್ಟದ ಕಾಲದಲ್ಲಿಯೂ ಬಡವರು, ಕೂಲಿಕಾರರರಿಗೆ ಘೋಷಿಸಿ ಮಾನವೀಯತೆ ಮೆರೆದಿದ್ದಾರೆ. ಮೋದಿ ಅವರು ಪ್ರೀತಿಯನ್ನು ಬಯಸುವ, ಎಲ್ಲರಲ್ಲೂ ಶಾಂತಿಯನ್ನು ಬಯಸುವಂತಹವರು. ದೇಶದ ಮಂದಿಯ ಮನಸ್ಸಿನಲ್ಲಿ ಆಳವಾಗಿ ನೆಲೆಯೂರಿರುವಂತಹ ಮಹಾನ್ ನಾಯಕ ಎಂದು ಹೊಗಳಿದರು.

ಸ್ವಚ್ಛಭಾರತ, ಆತ್ಮನಿರ್ಭರದಂತಹ ಯೋಜನೆಗಳು, ರೈತರ ಸಂಕಷ್ಟ ಅರಿತಿರುವ ಉತ್ತಮ ನಾಯಕ. ಎಂದಿಗೂ ಹೊಗಳಿಕೆಯನ್ನು ನೆಚ್ಚಿಕೊಂಡು ಕಾರ್ಯನಿರ್ವಹಿಸದವರಲ್ಲ. ಅವರ ಕಾರ್ಯವೈಖರಿಯನ್ನು ನಾವು ಅನುಸರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಯ್ಯದ್ ಸಲಾಂ, ಉಪಮೇಯರ್ ರಾಮ್‌ಮೋಹನ್ ರಾಜ್, ಬಿಜೆಪಿಯ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related