ಮುಖ್ಯ ಸಚೇತಕರಾಗಿ ಸತೀಶ್ ರೆಡ್ಡಿ

ಮುಖ್ಯ ಸಚೇತಕರಾಗಿ ಸತೀಶ್ ರೆಡ್ಡಿ

ಬೆಂಗಳೂರು: ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರನ್ನು ವಿಧಾನಸಭೆಯ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಮಂಗಳವಾರ ಘೋಷಿಸಿದರು. ಸಂತಾಪ ನಿರ್ಣಯಗಳನ್ನು ಅನುಮೋದಿಸಿದ ನಂತರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ಸದಸ್ಯರನ್ನು ಸದನಕ್ಕೆ ಪರಿಚಯಿಸಿದರು. ನಂತರ, ವಿಶ್ವೇಶ್ವರ ಹೆಗಡೆ ಕಾಗೇರಿ ಸತೀಶ್ ರೆಡ್ಡಿ ನೇಮಕ ಕುರಿತು ಘೋಷಿಸಿದರು.ಇತ್ತೀಚೆಗೆ ನಿಧನರಾದ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್, ನಟ ಸಂಚಾರಿ ವಿಜಯ್‌ಅವರ ನಿಧನಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೇಸ್ ಹಿರಿಯ ಶಾಸಕರು ಹೆಚ್.ಕೆ ಪಾಟೀಲ್, ಸಚಿವ ಮಾಧುಸ್ವಾಮಿ ಮೊದಲಾದವರು ಶ್ರದ್ದಾಂಜಲಿ ಅರ್ಪಿಸಿದರು.

Related