ಮತಗಟ್ಟೆಗೆ ರಂಗೋಲಿ ಚಿತ್ತಾರ

ಮತಗಟ್ಟೆಗೆ ರಂಗೋಲಿ ಚಿತ್ತಾರ

ಗಂಗಾವತಿ : ತಾಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ, ವಿಕಲಚೇತನರು, ವೃದ್ಧರಿಗೆ  ಶಾಲೆ ಆವರಣದಲ್ಲಿ ವೀಲ್ ಚೇರ್ ಸೌಲಭ್ಯವನ್ನು ತಾಲೂಕು ಪಂಚಾಯಿತಿ ಮುಖ್ಯ ಅಧಿಕಾರಿ ಡಾ. ಮೋಹನ್ ಕುಮಾರ್ ವ್ಯವಸ್ಥೆ ಮಾಡಿದ್ದರು.

ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಲು ಪ್ರೇರೇಪಿಸಲು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ನಗರದಲ್ಲಿರುವ ಎಲ್ಲಾ ಬೂತ್‌ಗಳಿಗೆ ತಳಿರು ತೋರಣ ಕಟ್ಟಿ ಅಲಂಕಾರ ಮಾಡಿದ್ದರು. ಅಲ್ಲದೇ ಮತದಾರರು ಬರುವ ದಾರಿಯಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕುವ ಮೂಲಕ ಹಬ್ಬದ ವಾತಾವರಣವನ್ನು ಮೂಡಿಸಿದ್ದರು.

Related