ಪಾಲಘಡ ಘಟನೆ ಖಂಡಿಸಿ ರಾಯಬಾಗಲ್ಲಿ ಉಪವಾಸ ಸತ್ಯಾಗ್ರಹ

ಪಾಲಘಡ ಘಟನೆ ಖಂಡಿಸಿ ರಾಯಬಾಗಲ್ಲಿ ಉಪವಾಸ ಸತ್ಯಾಗ್ರಹ

ರಾಯಬಾಗ : ಹಿಂದೂ ಧರ್ಮ ಆಚಾರ್ಯಸಭಾ ಮತ್ತು ವಿಶ್ವಹಿಂದೂ ಪರಿಷತ್ತ ಕರೆಕೊಟ್ಟ ಹಿನ್ನಲೆಯಲ್ಲಿ ಮಹಾರಾಷ್ಟçದ ಪಾಲಘಡದಲ್ಲಿ ಹಿಂದೂ ಸಾಧು ಸಂತರನ್ನು ಕ್ರೆಸ್ತ ಮಿಷನರಿಗಳು ಪೈಶಾಚಿಕವಾಗಿ ಅಮಾನವೀಯ ರೀತಿಯಾಗಿ ಕೊಂದು ಹಾಕಿದ ಹೀನಕೃತ್ಯವನ್ನು ಖಂಡಿಸಿ ಪಟ್ಟಣದ ಶಿವಾಜಿ ಪಾರ್ಕದ ಮಾಚಕನೂರ ಹಾಗೂ ಬಾಗಿ ಕುಟುಂಬದವರು ತಮ್ಮ ತೋಟದ ಮನೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.

ಮಹಾರಾಷ್ಟ್ರದ ಪಾಲಘಡದಲ್ಲಿ ಇತ್ತೀಚಿಗೆ ಹಿಂದೂ ಸಾಧು ಸಂತರಾದ ಪೂಜ್ಯಶ್ರೀ ಕಲ್ಪವೃಕ್ಷಗಿರಿ ಮಹಾರಾಜರು ಹಾಗೂ ಪೂಜ್ಯಶ್ರೀ ಸುಶೀಲಗಿರಿ ಮಹಾರಾಜರನ್ನು ವಸಾಹತುಶಾಹಿ  ಮಿಷನರಿಗಳು ನಕ್ಸಲರ ಹೆಸರಿನಲ್ಲಿ ಪೈಶಾಚಿಕವಾಗಿ ಹೊಡೆದು ಸಾಯಿಸಿದ ಹೀನಕೃತ್ಯವನ್ನು ಖಂಡಿಸಿ ಮಾಚಕನೂರ ಕುಟುಂಬದವರು ತಮ್ಮ ತೋಟದ ಮನೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.

ಇಂತಹ ಹೀನಕೃತ್ಯ ಎಸಗಿದ ಎಲ್ಲರ ಮೇಲೂ ಮಹಾರಾಷ್ಟ್ರ ಸರ್ಕಾರ ಮೇಲೆ ಸೂಕ್ತ ಕ್ರಮ ಕೈಗೊಂಡು ಈ ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನು ಗಲ್ಲು ಶಿಕ್ಷೆಗೆ ಗುರಿಮಾಡಬೇಕು ಮತ್ತು ಮತ್ತೆಂದೂ ದೇಶದಲ್ಲಿ ಇಂತಹ ಹೀನ ಕೃತ್ಯ ನಡೆಯದಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಎಚ್ಚರವಹಿಸಬೇಕೆಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಿದರು.

ಈ ಸಂದರ್ಭದಲ್ಲಿ ಏಕನಾಥ ಮಾಚಕನೂರ, ಭರಮಾ ಮಾಚಕನೂರ, ಅನ್ನಪೂರ್ಣ ಬಾಗಿ, ರೂಪಾ ಮಾಚಕನೂರ, ಸುಜಾತಾ ಮಾಚಕನೂರ, ವಿಠ್ಠಲ ಬಾಗಿ, ಕಸ್ತೂರಿ ಮಾಚಕನೂರ, ಮಂಜುಳಾ ಬಾಗಿ, ಸೇರಿದಂತೆ ಮಾಚಕನೂರ ಕುಟುಂಬದವರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

 

Related