ಮೇರು ವ್ಯಕ್ತಿತ್ವದ ಮಹಾಪುರುಷ ರಾಧಾಕೃಷ್ಣನ್

ಮೇರು ವ್ಯಕ್ತಿತ್ವದ ಮಹಾಪುರುಷ ರಾಧಾಕೃಷ್ಣನ್

ಬಾಗಲಕೋಟೆ : ಅಪರೂಪದ ರಾಜಕಾರಣಿ, ಅತ್ಯುತ್ತಮ ವ್ಯಕ್ತಿತ್ವವುಳ್ಳ ತತ್ವಜ್ಞಾನಿ, ರಾಜನಿತಿಜ್ಞ, ಶಿಕ್ಷಕ, ಪ್ರಾದ್ಯಾಪಕರು ಹಾಗೂ ಮೇರು ವ್ಯಕ್ತಿತ್ವದ ಮಹಾಪುರುಷ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಕೊರೋನಾ ಭೀತಿಯ ಮಧ್ಯೆ ನೆರೆ, ಪ್ರವಾಹದಿಂದಾಗಿ ಸಾಕಷ್ಟು ಬೆಳೆ, ಆಸ್ತಿ ಹಾನಿಗೀಡಾಗಿವೆ. ಆರ್ಥಿಕವಾಗಿ ತೊಂದರೆಯಾಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಕಾರ್ಯವಾಗಿಲ್ಲ. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ನಿಧನದಿಂದ ಶೋಕಾಚರಣೆ ಹಿನ್ನಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ರಾಧಾಕೃಷ್ಣನ್ ಅವರು ಸಾಧನೆ ಮೂಲಕ ಈಡೀ ದೇಶ ಗುರುತಿಸುವ ಕೆಲಸ ಮಾಡಿದ್ದಾರೆ. ಇವರ ಹಾದಿಯಲ್ಲಿ ಶಿಕ್ಷಕರು ನಡೆಯಬೇಕಾಗಿದೆ ಎಂದರು.

Related