ಅರ್ಹ ಫಲಾನುಭವಿಗಳಿಗೆ ಮನೆ ನೀಡಿ- ಯತ್ನಾಳ್ 

ಅರ್ಹ ಫಲಾನುಭವಿಗಳಿಗೆ ಮನೆ ನೀಡಿ- ಯತ್ನಾಳ್ 

ವಿಜಯಪುರ: ಬಸವ ನಗರದಲ್ಲಿ ಈಗಾಗಲೇ ನಿರ್ಮಿಸಿ ಹಂಚಿಕೆ ಮಾಡಿರುವ 1722 ಮನೆಗಳಲ್ಲಿ ಬಾಕಿ ಉಳಿದಿರುವ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

ಯತ್ನಾಳ್ ಅವರ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆಯ ಸಭಾಭವನದಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ತಿಳಿದ್ದಾರೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಿ+೧ ಮಾದರಿಯ ಎ.ಹೆಚ್.ಪಿ ಉಪಘಟಕದಡಿ ಆಯ್ಕೆಯಾದ 1493 ಫಲಾನುಭವಿಗಳಲ್ಲಿ ವಂತಿಕೆ ಹಣ ಭರಿಸದ ಫಲಾನುಭವಿಗಳ ಆಯ್ಕೆಯನ್ನು ಅಸಿಂಧುಗೊಳಿಸಿ ವಂತಿಕೆಯನ್ನು ಬರಿಸುವಂತಹ ಅರ್ಹ ಫಲಾನುಭವಿಗಳ ಆಯ್ಕೆ ಮಾಡಲು ಸೂಚನೆ ನೀಡಿದರು.

ಹಾಗೆಯೇ ಶಾಸ್ತ್ರಿ ನಗರದ ಬಯಲು ಜಾಗದಲ್ಲಿ ವಾಸಿಸುವ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದ್ದಾರೆ. ರೈಲ್ವೇ ಸ್ಟೇಷನ್ ಹತ್ತಿರ ವಾಸಿಸುತ್ತಿರುವ ಜನರನ್ನು ಬಸವನಗರಕ್ಕೆ ವರ್ಗಾವಣೆ ಮಾಡುವಂತೆ ತಿಳಿಸಿದರು.

Related