ಲೇಡಿಹಿಲ್ ಸರ್ಕಲ್‌ಗೆ ಹೊಸ ಹೆಸರು

ಲೇಡಿಹಿಲ್ ಸರ್ಕಲ್‌ಗೆ ಹೊಸ ಹೆಸರು

ಮಂಗಳೂರು : ನಗರದ ಲೇಡಿಹಿಲ್ ಸರ್ಕಲ್‌ಗೆ ‘ಬ್ರಹ್ಮಶ್ರೀ ನಾರಾಯಣ ಗುರು’ ಹೆಸರನ್ನಿಡಬೇಕೆಂದು ಬಿರುವೆರ್ ಕುಡ್ಲ ಸಂಘಟನೆ ಸೇರಿದಂತೆ ನಾನಾ ಸಂಘಟನೆಗಳು ಒತ್ತಾಯಿಸಿದ್ದು, ಈ ಹೆಸರನ್ನು ಕೆಲವು ಬಸ್‌ಗಳಲ್ಲಿ ನಮೂದಿಸಲಾಗಿದ್ದು, ಆ ಬಸ್‌ಗಳ ವಿರುದ್ಧ ಆರ್‌ಟಿಓ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಇದನ್ನು ಖಂಡಿಸಿ ಲೇಡಿಹಿಲ್‌ನಲ್ಲಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಕುಡ್ಲಸಂಘಟನೆ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ದಿವಾಕರ್‌ಗೆ ಮನವಿ ಸಲ್ಲಿಸಿ ಆಗ್ರಹ ವ್ಯಕ್ತಪಡಿಸಿದರು. ಇದಕ್ಕೆ ಸ್ಥಳೀಯ ಶಾಲಾ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿ, ಈ ಮಧ್ಯೆ ನಾರಾಯಣ ಗುರು ಪರ-ವಿರೋಧ ಚರ್ಚೆ ನಡೆದಿದ್ದು, ಕೆಲವು ಬಸ್‌ಗಳಲ್ಲಿ ಸ್ಟಿಕ್ಕರ್ ಕೂಡ ಅಂಟಿಸಲಾಗಿ ಕಾರಣವಾಗಿದೆ.

Related