ಮತಏಣಿಕೆ ಕೇಂದ್ರದ ಬಳಿ ಜನಸಾಗರ

ಮತಏಣಿಕೆ ಕೇಂದ್ರದ ಬಳಿ ಜನಸಾಗರ

ಚಿತ್ರದುರ್ಗ : ಇಂದು ಎರಡು ಹಂತಗಳಲ್ಲಿ ರಾಜ್ಯದಲ್ಲಿ ನಡೆದಂತ ಗ್ರಾ.ಪಂ ಮತಏಣಿಕೆ ಕಾರ್ಯ ನಡೆಯುತ್ತಿದೆ. ಇತ್ತ ಕೋಟೆ ನಾಡು ಚಿತ್ರದುರ್ಗದಲ್ಲಿ ಮತಏಣಿಕೆ ಕೇಂದ್ರದಲ್ಲಿ ಜನವೋ ಜನ. ಮತಏಣಿಕೆ ಕೇಂದ್ರ ಬಳಿ ಜನಸಾಗರವೇ ನೆರೆದಿದ್ದು, ಸಾವಿರಾರು ಸಂಖ್ಯೆಯ ಜನಸಾಗರವೇ ಸೇರಿದೆ. ಇಂತಹ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ.

ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಎರಡು ಹಂತಗಳಲ್ಲಿ ಜಿಲ್ಲೆಯಲ್ಲಿ ನಡೆದಂತ ಗ್ರಾಮ ಪಂಚಾಯ್ತಿ ಚುನಾವಣೆಯ ಮತಏಣಿಕೆ ಕಾರ್ಯ ಇಂದು ನಡೆಯುತ್ತಿದೆ.

ಕಾಲೇಜಿನ ಗೇಟಿನ ಮುಂಭಾಗದಲ್ಲಿ ಫಲಿತಾಂಶ ತಿಳಿಯಲು ಸಾವಿರಾರು ಸಂಖ್ಯೆಯ ಜನರು ನೆರೆದಿದ್ದಾರೆ. ಇಂತಹ ಜನರಿಗೆ ಫಲಿತಾಂಶ ಕೇಳೋದಕ್ಕಾಗಿ ಪೆಂಡಾಲ್ ಹಾಕಿ, ಕುರ್ಚಿ ವ್ಯವಸ್ಥೆ ಕೂಡ ಮಾಡಲಾಗಿದೆ. ಹೀಗಿದ್ದೂ ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವಂತ ಜನರನ್ನು ಪೊಲೀಸರು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

Related