ಸಹಾಯ ಮಾಡಿ ಮಾನವೀಯತೆ ಮೆರೆಯಿರಿ

ಸಹಾಯ ಮಾಡಿ ಮಾನವೀಯತೆ ಮೆರೆಯಿರಿ

ಕೊಪ್ಪಳ: ತಾಲ್ಲೂಕಿನ ನಿಲೋಗಪುರ ಗ್ರಾಮದ ವೆಂಕಟೇಶ್ ಅವರು ಕನಸುಗಳ ಬೆನ್ನತ್ತಿ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕಾದ ಯುವಕ. ಆದರೆ ವಿಧಿ ಲಿಖಿತ ಬೇರೆಯೇ ಆಗಿತ್ತು.

ಹೌದು ನಿಲೋಗಪುರ ಗ್ರಾಮದ ಯುವಕ ಕೋಮಾ ಸ್ಥಿತಿಯಲ್ಲಿದ್ದಾನೆ. ಕಳೆದ ವರ್ಷ ಆಂಜನೇಯ ಜಾತ್ರೆಯ ವೇಳೆ ದೇವಸ್ಥಾನ ಗೋಪುರ ಕೆಲಸ ಮಾಡುವಾಗ ಮೇಲಿಂದ ಬಿದ್ದು ಕೋಮಾ ಸ್ಥಿತಿಗೆ ತಲುಪಿ ಒಂದು ವರ್ಷವಾಗಿದೆ. ಸಾವು ಬದುಕಿನ ನಡುವೆ ಈ ಯುವಕ ಹೋರಾಡುತ್ತಿದ್ದಾನೆ.

ಮಗ ಕೋಮಾ ಸ್ಥಿತಿಯಲ್ಲಿರುವುದನ್ನು ಕಂಡು ತಂದೆ ತಾಯಿ ಮನಸ್ಸು ಮರುಗುತ್ತಿದೆ. ನೋವು ನುಂಗಿಕೊಂಡು ಆರೈಕೆ ಮಾಡುತ್ತಿರುವ ತಂದೆ ತಾಯಿಯ ಪರಿಸ್ಥಿತಿ ನೋಡಿದರೆ ಕರುಳು ಕಿವಿಚದಂತಾಗುವುದು ಮಾತ್ರ ಸತ್ಯ.

ಈಗಾಗಲೇ ಹೊಲ ಮಾರಿ ಸರಿಸುಮಾರು 16 ಲಕ್ಷದಷ್ಟು ವ್ಯಯಿಸಿದ ಇವರಿಗೆ ಇನ್ನು ಮುಂದಿನ ಚಿಕಿತ್ಸೆಗಾಗಿ ಸಹೃದಯಿ ದಾನಿಗಳ ಆಸರೆ ಪಡೆಯದೆ ನಿರ್ವಾಹವಿಲ್ಲ. ಸ್ಥಳೀಯ ಯುವಕರು ಪ್ರತಿದಿನ ಮನೆಗೆ ಬಂದು ವೆಂಕಟೇಶ್ ಗೆ ಮಸಾಜ್ ಮಾಡುವ ಮುಖಾಂತರ ಮಾನವೀಯತೆ ಮೆರೆಯುತ್ತಿದ್ದಾರೆ.

ವೆಂಕಟೇಶ್‍ಗೆ ಸಮರ್ಪಕವಾದ ಚಿಕಿತ್ಸೆ ನೀಡಬೇಕಾದರೆ ಇನ್ನೂ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ನಮ್ಮಂತೆಯೇ ಸಂತಸದಿಂದ ನಲಿದಾಡಬೇಕಿದ್ದ ಯುವಕನ ಚಿಕಿತ್ಸೆಗೆ ಸಹೃದಯಿಗಳು ಮಾನವೀಯ ಹಸ್ತವನ್ನು ಚಾಚಬೇಕಾಗಿದೆ.

ಸಹಾಯ ಮಾಡಲು ಇಚ್ಛಿಸುವವರು ಚೈತ್ರಾ ಜಗದೀಶ್ ರೆಡ್ಡಿ ಅವರ  ಫೋನ್ ಪೇ ಅಥವಾ ಗೂಗಲ್ ಪೇ ನಂಬರ್ ಗೆ – 8970556686 ಹಣ ವರ್ಗಾಯಿಸಬಹುದು.

Related