ಬೆಂಗಳೂರು: ಅಗರ ಕೆರೆ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡೆ ಕವಿತಾ ರೆಡ್ಡಿ ಅವರು ಕಿರಿಕ್ ನಟಿ ಸಂಯುಕ್ತಾ ಹೆಗ್ಡೆ ಹಾಗೂ ಅವರ ಸ್ನೇಹಿತರ ಬಳಿ ಕ್ಷಮೆಯಾಚಿಸಿದ್ದಾರೆ.
ಸಂಯುಕ್ತಾ ಹೆಗ್ಡೆ ಅಗರ ಪಾರ್ಕ್ನಲ್ಲಿ ದೇಹಕಾಣುವಂತಹ ಸ್ಪೋಟ್ರ್ಸ್ ಬಟ್ಟೆ ಧರಿಸಿದ್ದರು ಎಂಬ ಆರೋಪದ ಮೇರೆಗೆ ಕವಿತಾ ರೆಡ್ಡಿ ಅವರನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ್ದರು. ಈ ಬಗ್ಗೆ ಸಂಯುಕ್ತಾ ಸ್ನೇಹಿತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು.
ಸೆ.4 ರಂದು ನಡೆದ ಘಟನೆ ಕುರಿತು ಕ್ಷಮೆ ಕೇಳಿರುವ ಕವಿತಾ ರೆಡ್ಡಿ, ನಾನು ಸಂಯುಕ್ತಾ ಹೆಗ್ಡೆ ಹಾಗೂ ಅವರ ಸ್ನೇಹಿತರೊಡನೆ ನಡೆದುಕೊಂಡ ರೀತಿಯ ಬಗ್ಗೆ ಅರಿವಾಗಿದೆ. ನನ್ನ ಮತ್ತು ಅವರೊಟ್ಟಿಗಿನ ವಾದ ಆಕ್ರಮಣಕಾರಿಯಾಗಿ ಮಾರ್ಪಟ್ಟಿತು. ಇದರ ಸಲುವಾಗಿ ನಾನು ಸಂಯುಕ್ತಾ ಹೆಗ್ಡೆ ಹಾಗೂ ಅವರ ಸ್ನೇಹಿತರ ಬಳಿ ಕ್ಷಮೆ ಯಾಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
I have always opposed Moral Policing. I realize that my actions were construed as such. An argument ended up in me reacting aggressively as well, it was a mistake. As a responsible citizen n progressive woman, I own up to n sincerely apologise to @SamyukthaHegde n her Friends! pic.twitter.com/pM9UJkWESC
— Kavitha Reddy (KR) Jai Bhim! (@KavithaReddy16) September 6, 2020
ಸಾಮಾಜಿಕ ಜಾಲತಾಣಗಳಲ್ಲಿ ಕವಿತಾ ರೆಡ್ಡಿ ಅವರ ವರ್ತನೆಯನ್ನು ಸಾಕಷ್ಟು ಮಂದಿ ಖಂಡಿಸಿದ್ದರು.