ಜಸ್ಟ್ ಮಾತುಮಾತಲ್ಲೆ ಕೊಲೆ

ಜಸ್ಟ್ ಮಾತುಮಾತಲ್ಲೆ ಕೊಲೆ

ಪಿರಿಯಾಪಟ್ಟಣ, ಫೆ.12 :  ಕ್ಷುಲಕ ಕಾರಣಕ್ಕೆ ಆರಂಭವಾದ ಮಾತಿನ ಚಕಮಕಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ತಾಲೂಕಿನ ಕಂಪಲಾಪುರ ಗ್ರಾಮದ ದಾಸಯ್ಯ ಎಂಬುವವರ ಮಗ ಡಿ.ಕಾಂತರಾಜು (44) ಎಂಬಾತ ಕೊಲೆಯಾಗಿದ್ದಾರೆ. ಇದೇ ಗಲಾಟೆಯಲ್ಲಿ ಈತನ ತಮ್ಮ ನಾರಾಯಣನ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ. ಗ್ರಾಮದ ಈರಯ್ಯ ಎಂಬುವವರ ಮಗ ರಾಜು ಎಂಬಾತ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಹೇಳಿ ಪೊಲೀಸ್ಠಾಣೆಯಲ್ಲಿ ಶರಣಾಗಿದ್ದಾನೆ. ಫೆ.5ರಂದು ಮಾತಿನ ಚಕಮಕಿ ನಡೆದು ಗಲಾಟೆಯಾಗಿತ್ತು.

Related