ಕೆರೆ ಕಾಮಗಾರಿ ಪುನರಾರಂಭಿಸುವಂತೆ ನಿವಾಸಿಗಳ ಆಕ್ರೋಶ

ಕೆರೆ ಕಾಮಗಾರಿ ಪುನರಾರಂಭಿಸುವಂತೆ ನಿವಾಸಿಗಳ ಆಕ್ರೋಶ

ಬೆಂಗಳೂರು: ಪ್ರತಿನಿತ್ಯ ಸಾವಿರಾರು ಜನ ಓಡಾಡುವ ವರ್ತೂರು ಮತ್ತು ಬೆಳ್ಳಂದೂರು ಕೆರೆಯ ಕಾಮಗಾರಿಗಳು ನೆನಗುದಿಗೆ ಬಿದ್ದಿರುವುದ ಜನಸಾಮಾನ್ಯರು ಓಡಾಡಲು ಭಯಪಡುವ ಪರಿಸ್ಥಿತಿ ಬಂದೊದಗಿದೆ ಎಂದು ಸುತ್ತಮುತ್ತಲಿರುವ ಕಾರ್ಯಕರ್ತರು ಮತ್ತು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಳೆದ ಬಾರಿ ವಿಪರೀತ ಮಳೆಯಾದಾಗ ವರ್ತೂರು ಮತ್ತು ಬೆಳ್ಳಂದೂರು ಕೆರೆ ಸಂಪೂರ್ಣ ಒಡೆದು ಹದಗೆಟ್ಟಿರುವುದರಿಂದ ಈಗ ಏನಾದರೂ ಮತ್ತೆ ಮಳೆಯಾದರೆ ಕೆರೆ ನೀರು ಮತ್ತುಚರಂಡಿ ನೀರು ಮನೆಗೆ ನುಗ್ಗುತ್ತದೆ. ಆದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಕೂಡಲೇ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಕೆರೆ ಕಾಮಗಾರಿಗಳನ್ನು ಪುನರ್ ಪ್ರಾರಂಭ ಮಾಡಬೇಕೆಂದು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರ ಶೀಘ್ರದಲ್ಲಿ ಜಲಮೂಲಗಳನ್ನು ಪುನಶ್ಚೇತನಗೊಳಿಸಬೇಕು ಎಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

 

Related