ಉದ್ಯಾನವನ ಉದ್ಘಾಟನೆ  ಶಾಸಕ ಸತೀಶ್ ರೆಡ್ಡಿ

ಉದ್ಯಾನವನ ಉದ್ಘಾಟನೆ  ಶಾಸಕ ಸತೀಶ್ ರೆಡ್ಡಿ

ಬೆಂಗಳೂರು : ಭೂಗಳರ ಪಾಲಾಗಿದ್ದ ಸಾರ್ವಜನಿಕ ಆಸ್ತಿಯನ್ನು ಕಾನೂನು ಹೋರಾಟದ ಮೂಲಕ ವಶಪಡಿಸಿಕೊಂಡು ಅತ್ಯುತಮ ಉದ್ಯಾನವನ ನಿರ್ಮಿಸಿ ಸಾರ್ವಜನಿಕರ ಬಳಕೆಗೆ ನಿರ್ಮಿಸಿರುವುದಾಗಿ ಶಾಸಕ ಸತೀಶ್ ರೆಡ್ಡಿ ತಿಳಿಸಿದರು.

ಶನಿವಾರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿನ ಮಂಗಮ್ಮನಪಾಳ್ಯದ ಐಟಿಐ ಬಡಾವಣೆಯಲ್ಲಿ ಅಭಿವೃದ್ಧಿಗೊಳಿಸಲಾಗಿರುವ ಉದ್ಯಾನವನವನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಉದ್ಘಾಟಿಸಿ ಮಾತನಾಡಿದರು

ಈ ಉದ್ಯಾನವನ್ನು ಮೂರು ಎಕರೆಯ ಸರ್ಕಾರಿ ಸ್ವತ್ತಿನಲ್ಲಿ ಒಂದುವರೆ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಹಲವಾರು ವರ್ಷಗಳಿಂದ ಈ ಸರ್ಕಾರಿ ಭೂಮಿಯನ್ನು ಭೂಗಳ್ಳರು ವಶಪಡಿಸಿಕೊಂಡಿದ್ದರು. ಅಧಿಕಾರಿಗಳು ಶಾಸಕರ ನಿರಂತರ ಹೋರಾಟದಿಂದ ಭೂಗಳ್ಳರಿಂದ ಭೂಮಿಯನ್ನು ವಶಪಡಿಸಿಕೊಂಡು ಪಾರ್ಕ್ ಅಭಿವೃದ್ಧಿಗೊಳಿಸಲಾಗಿದೆ ಎಂದು ಹೇಳಿದರು.

ಇನ್ನು ಇಬ್ಳೂರು ಗ್ರಾಮದಲ್ಲಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 250 ಮೀ ಉದ್ದದ ಕಾಂಕ್ರೀಟ್ ರಸ್ತೆಯನ್ನು ಶಾಸಕ ಸತೀಶ್ ರೆಡ್ಡಿ ನೆರವೇರಿಸಿದರು.

Related