ವಂಚಕರನ್ನು ಕೂಡಲೇ ಬಂಧಿಸಲು ಆಗ್ರಹ

ವಂಚಕರನ್ನು ಕೂಡಲೇ ಬಂಧಿಸಲು  ಆಗ್ರಹ

ಬೆಂಗಳೂರು: ಕರ್ನಾಟಕ ರಾಜ್ಯದ ಭ್ರಷ್ಟಾಚಾರಗಳ ರೂವಾರಿಯಾದ 420 ಅಶ್ವಿನ್‌ರಾವ್ ಮತ್ತು ಶಿವಾಜಿನಗರ ಹಾಗೂ ಆಂಧ್ರಪ್ರದೇಶದ ನಲ್ಲೂರು ಗ್ರಾಮದ ಸೈಲೆಂಟ್ ಕಿಲ್ಲರ್ ಹಾಗೂ ಕರೀಂಬಾಲ್ ತೆಲಗಿಯ ಶಿಷ್ಯನೆಂದು ಹೇಳಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡಿರುವ 840 ಕಲೀಲ್ ಹಾಗೂ ತಮಿಳುನಾಡಿನ 420 ಜಯರಾಜ್ ಇವರ ಮೇಲೆ 1400 ಪ್ರಕರಣಗಳು ದಾಖಲಾಗಿದ್ದು 22000 ಜನರಿಗೆ ವಂಚನೆ ಮಾಡಿರುವ ಈ 420 ಗಳನ್ನು ಕೂಡಲೇ ಬಂಧಿಸಿ ಎಂದು ಹೇಳಿದ್ದಾರೆ.

ಪ್ರೆಸ್‌ ಕ್ಲಬ್‌ ನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಬಿ.ಆರ್.ಮುನಿರಾಜು ರವರು ಮಾತನಾಡಿ, ಅಶ್ವಿನ್‌ರಾವ್ ಮತ್ತು ಶಿವಾಜಿನಗರ ಹಾಗೂ ಆಂಧ್ರಪ್ರದೇಶದ ನಲ್ಲೂರು ಗ್ರಾಮದ ಸೈಲೆಂಟ್ ಕಿಲ್ಲರ್ ಹಾಗೂ ಕರೀಂಲಾಲ್ ತೆಲಗಿಯ ಶಿಷ್ಯನೆಂದು ಹೇಳಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡಿರುವ 840 ಕಲೀಲ್ ಹಾಗೂ ತಮಿಳುನಾಡಿನ 420 ಜಯರಾಜ್ ಇವರ ಮೇಲೆ 1400 ಪ್ರಕರಣಗಳು ದಾಖಲಾಗಿದ್ದು 22000 ಜನರಿಗೆ ವಂಚನೆ ಮಾಡಿ ರಾಜಾ ರೋಷವಾಗಿ ಇರುವ ಇವರನ್ನ ಇನ್ನು ಬಂದಿಸಿಲ್ಲ ಮತ್ತು ಇದರಲ್ಲಿ ಪೋಲಿಸ್‌ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಎಂದು ಬೇಸರ ವ್ಯಕ್ತ ಪಡಿಸಿದರು.
ಸಾರ್ವಜನಿಕರಿಗೆ ಊಹಾಪೋಹಗಳನ್ನು ಹಬ್ಬಿಸಿ ಸಾರ್ವಜನಿಕ ಸಭೆಗಳನ್ನು ಮಾಡಿ, ಸಾರ್ವಜನಿಕರಿಗೆ ಸುಳ್ಳು ಆಶ್ವಾಸನೆಗಳ ಮೂಲಕ ಸಾರ್ವಜನಿಕರಿಗೆ ಮುಂದೆಯೇ ನೀವು 2 ಲಕ್ಷ ಮೊದಲನೇ ಕಂತಿನಲ್ಲಿ ನಮಗೆ ನೀಡಿದರೆ ನಿಮಗೆ 2 ತಿಂಗಳಲ್ಲಿ 20 ಲಕ್ಷ ಕೊಡುತ್ತೇವೆ. ನೀವು 20 ಲಕ್ಷ ನೀಡಿದರೆ 2 ತಿಂಗಳಲ್ಲಿ 1 ಕೋಟಿ ನೀಡುತ್ತೇವೆ. ಎಂಬ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಇದರಲ್ಲಿ ಕೆಲವು ಸಾರ್ವಜನಿರನ್ನು ಪರಿಚಯ ಮಾಡಿಕೊಂಡು ಜನ ನಂಬುವ ಹಾಗೆ ಜನರಿಂದ ಹಣವನ್ನು ತೆಗೆದುಕೊಂಡು ಇವರು ತೆಗೆದುಕೊಂಡ ಹಣದಲ್ಲಿ ಒಬ್ಬ ಇಬ್ಬರಿಗೆ ಮಾತ್ರ ಹಣವನ್ನು ನೀಡಿ ಹಣ ಪಡೆದುಕೊಂಡು ವ್ಯಕ್ತಿಗಳಿಂದ ಸಾರ್ವಜನಿಕರಿಗೆ ಸುಳ್ಳು ಆಶ್ವಾಸನಗಳನ್ನು ಬಹಿರಂಗಪಡಿಸಿ ಜನರು ನಂಬುವ ಹಾಗೆ ಅವರ ಮನೆಗಳಿಗೂ ಸಹ ಭೇಟಿ ಮಾಡಿ ಸುಮಾರು 500 ಕೋಟಿಗಿಂತ ಹೆಚ್ಚಾಗಿ ನಲ್ಲೂರು ಜಿಲ್ಲೆಯಲ್ಲೇ ಮೊದಲನೇ ಬಾರಿಗೆ ವಂಚನೆ ಮಾಡಿ ಎರಡನೇ ಬಾರಿ ಪಾಂಡಿಚೇರಿಗೆ ಜಂಪ್ ಮಾಡಿ ನಂತರ ತಮಿಳುನಾಡಿಗೆ ಬಂದು ಅನಂತರ ಗೋವಾಕ್ಕೆ ಜಿಗಿದು ಮತ್ತೆ ಕರ್ನಾಟಕಕ್ಕೆ ಬಂದು ಯಥಾಸ್ಥಿತಿಯನ್ನು ಮುಂದುವರೆಸಿ ಸಾರ್ವಜನಿಕರಿಗೆ ವಂಚಿಸಿದ್ದಾರೆ.

ಇದರ ಮಧ್ಯದಲ್ಲಿ ನೊಂದಂತಹ ಸಾರ್ವಜನಿಕರ ಪರವಾಗಿ ಅಶ್ವಿನ್‌ರವರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೂ ಮತ್ತು ಗೃಹ ಸಚಿವರಿಗೂ ಮನವಿಗಳನ್ನು ಸಲ್ಲಿಸಿ ಸುಮಾರು ದಿನಗಳು ಕಳೆದರೂ ಇದುವರೆವಿಗೂ ನ್ಯಾಯ ಎಂಬುವುದು ದೊರೆಯದಿದ್ದುದರಿಂದ ಕೂಡಲೇ ಕ್ರಮ ಜರುಗಿಸಬೇಕು ಇಲ್ಲದ್ದಿದ್ದಲ್ಲಿ ಮೇ ತಿಂಗಳು ೧೭ರಂದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Related