ಮಾರಣಾಂತಿಕ ಹಲ್ಲೆ : ಮಾಜಿ ಸೈನಿಕರ ಪ್ರತಿಭಟನೆ

  • In State
  • August 4, 2021
  • 426 Views
ಮಾರಣಾಂತಿಕ ಹಲ್ಲೆ : ಮಾಜಿ ಸೈನಿಕರ ಪ್ರತಿಭಟನೆ

ಮುದ್ದೇಬಿಹಾಳ – ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭೋಯಾಕೇರಿಯ ಬಳಿ ಸೇವೆಸಲ್ಲಿಸುತ್ತಿದ್ದ ಯೋಧ ಅಶೋಕ್ ಕುಮಾರ್ ಹಾಗೂ ಅವರ ಕುಟುಂಬದ ಮೇಲೆ ಮರಣಾಂತಿಕ ಹಲ್ಲೆ ನಡೆದಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಮಂಗಳವಾರ ತಾಲೂಕು ಮಾಜಿ ಸೈನಿಕರ ಸಂಘ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಸಂಘದ ಪದಾಧಿಕಾರಿಗಳು ಕೂಡಲೇ ಜಿಲ್ಲಾಧಿಕಾರಿಗಳು ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಸೈನಿಕರ ಸಂಘದ ಗೌರವ ಅಧ್ಯಕ್ಷ ಎಸ್.ಆರ್.ಕುಲಕರ್ಣಿ, ಅಧ್ಯಕ್ಷ ಆರ್.ಐ.ಹಿರೇಮಠ, ಉಪಾಧ್ಯಕ್ಷ ಬಿ.ಎಚ್.ನಗರಬೆಟ್ಟ, ಕಾರ್ಯದರ್ಶಿ ಎ.ಎಸ್.ನಾಗೂರ, ಸದಸ್ಯರಾದ ವಾನಮರಾವ್ ಲಮಾಣಿ, ಎಂ.ಬಿ.ವಠಾರ, ಎಸ್.ಬಿ.ಹೊಳಿ, ಎಸ್. ವಿ. ಹಿರೇಮಠ, ಎ. ಎಚ್. ಕಕ್ಕೇರಿ, ಎಸ್. ಜೆ.ಕುರಿ, ಐ. ಬಿ. ಮ್ಯಾಗೇರಿ, ಸುಧೀರ ಲಮಾಣಿ, ಎಸ್. ಡಿ. ಹೂಗಾರ, ಸಿ. ಐ. ಬಿದರಕುಂದಿ ಸೇರಿದಂತೆ ವೀರಯೋಧರ ಸ್ಮಾರಕ ಸಮಿತಿ ಸದಸ್ಯರು ಭಾಗವಹಿಸಿದರು.

Related