ನಗರಾಭಿವೃದ್ಧಿಗೆ ಉತ್ತೇಜನೆ : ಭೈರತಿ‌ ಬಸವರಾಜ್

ನಗರಾಭಿವೃದ್ಧಿಗೆ ಉತ್ತೇಜನೆ : ಭೈರತಿ‌ ಬಸವರಾಜ್

ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಉತ್ತಮ ಬೀದಿಗಳ ಸಾಮರ್ಥ್ಯ ಅಭಿವೃದ್ಧಿಪಡಿಸುವ ಸಲುವಾಗಿ ಏರ್ಪಡಿಸಿದ್ದ ( “Healthy Streets: Capacity Development Workshop” ) ಎರಡು ದಿನದ ಕಾರ್ಯಾಗಾರದಲ್ಲಿ ನಗರಾಭಿವೃದ್ಧಿ ಸಚಿವರಾದ ಶ್ರೀ ಭೈರತಿ‌ ಬಸವರಾಜ್ ರವರು ಹಾಗೂ ಬಿಬಿಎಂಪಿ ಆಡಳಿತಗಾರರಾದ ಶ್ರೀ ರಾಕೇಶ್ ಸಿಂಗ್ ರವರು ಭಾಗವಹಿಸಿದ್ದರು.

ಎರಡು ದಿನದ ಕಾರ್ಯಗಾರದಲ್ಲಿ ನಗರದ ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಪ್ರತ್ಯೇಕ ಸೈಕಲ್ ಪಥಕ್ಕೆ ಹೆಚ್ಚು ಆದ್ಯತೆ ನೀಡುವುದು, ವಾಹನ‌ ನಿಲುಗಡೆಗೆ ಪ್ರತ್ಯೇಕ ನೀತಿ ರೂಪಿಸುವುದು, ಬೀದಿಗಳ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.( ವಿವರದ ಪ್ರತಿ ಲಗತ್ತಿಸಿದೆ )

ಈ ಕಾರ್ಯಾಗಾರದಲ್ಲಿ ಸ್ಮಾರ್ಟ್ ಸಿಟಿ ಮಿಷನ್ ನ ಜಂಟಿ ನಿರ್ದೇಶಕ ಕುನಾಲ್ ಕಪೂರ್, ಬೆಂಗಳೂರು ಸ್ಮಾರ್ಟ್ ಸಿಟಿ ಲಿ.ನ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Related