ದಾಂಪತ್ಯ ಕಾಲಿಟ್ಟ ‘ಮಂಗಳೂರು ಹುಡ್ಗಿ’

ದಾಂಪತ್ಯ ಕಾಲಿಟ್ಟ ‘ಮಂಗಳೂರು ಹುಡ್ಗಿ’

ಬೆಂಗಳೂರು, ಮಾ. 12 : ಹುಬ್ಬಳ್ಳಿ ಹುಡ್ಗ, ಮಂಗಳೂರು ಹುಡ್ಗಿ’, ‘ರಾಧಾ ಕಲ್ಯಾಣ’ ಧಾರಾವಾಹಿಯ ಖ್ಯಾತಿಯ ನಟಿ  ರಾಧಿಕಾ ರಾವ ಹಸೆಮಣೆ ಏರಿದ್ದಾರೆ. ಮೂಲತಃ ಮಂಗಳೂರಿನವರಾದ ಅವರು ತಮ್ಮ ಗೆಳೆಯ ಆಕರ್ಷ್ ಭಟ್ ಜೊತೆ ಮೂಡಬಿದಿರೆಯಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಪರಸ್ಪರ ಪ್ರೀತಿಸಿದ್ದ ಈ ಜೋಡಿ, ನಂತರ ಮನೆಯವರನ್ನು ಒಪ್ಪಿಸಿ, ಇದೀಗ ಅದ್ದೂರಿಯಾಗಿ ಸಪ್ತಪದಿ ತುಳಿದಿದೆ. ಆರಂಭದಲ್ಲಿ ಸ್ನೇಹಿತರಾಗಿದ್ದ ರಾಧಿಕಾ ಮತ್ತು ಆಕರ್ಷ್ ಭಟ್‌, ಪ್ರೀತಿಸಲು ಆರಂಭಿಸಿದ್ದರು. ಇಬ್ಬರ ವಿಷಯ ಮನೆಯವರಿಗೆ ತಿಳಿದ ಮೇಲೆ ಕುಟುಂಬದವರು ಒಪ್ಪಿ, ಈಗ ಮದುವೆ ಮಾಡಿದ್ದಾರೆ. ಅ.13ರಂದು ರಾಧಿಕಾ-ಆಕರ್ಷ್‌ ಎಂಗೇಜ್‌ಮೆಂಟ್ ನಡೆದಿತ್ತು. ತಮ್ಮ ಪ್ರೀತಿ ಕುರಿತು ಮಾತನಾಡಿದ್ದ ರಾಧಿಕಾ, ‘ಇಬ್ಬರ ಮನೆಯವರು ತುಂಬ ಖುಷಿಯಾಗಿದ್ದಾರೆ. ನಾವು ಹುಡುಕಿದರೂ ಇಂಥ ಒಳ್ಳೆಯ ಸಂಬಂಧ ಬರುತ್ತಿತ್ತೋ ಇಲ್ಲವೋ ಎನ್ನುತ್ತಿದ್ಧಾರೆ ಮನೆಯವರು. ಇಬ್ಬರೂ ಲವ್ ಮಾಡಿದಮೇಲೆ ಮನೆಯವರನ್ನು ಹೇಗೆ ಒಪ್ಪಿಸಬೇಕು ಎಂಬ ಪ್ರಶ್ನೆಯೇ ಬರಲಿಲ್ಲ. ತುಂಬ ಖುಷಿಯಾಗ್ತಿದೆ’ ಎಂದಿದ್ದರು.

ಪರಿಚಯವಾಗಿ, ಕಳೆದ ಜುಲೈನಲ್ಲಿ ರಾಧಿಕಾಗೆ ಆಕರ್ಷ್‌ ಪ್ರೇಮ ನಿವೇದನೆ ಮಾಡಿದ್ದರು. ಖುಷಿಯಿಂದಲೇ ರಾಧಿಕಾ ಈ ಪ್ರಪೋಸಲ್‌ಅನ್ನು ಒಪ್ಪಿದ್ದರು.

 

Related