ಯುವರಾಜ್ ವಿಚ್ಛೇದನ ಪಡೆಯಲು ಕಾರಣ ಏನು ಗೊತ್ತಾ?

ಯುವರಾಜ್ ವಿಚ್ಛೇದನ ಪಡೆಯಲು ಕಾರಣ ಏನು ಗೊತ್ತಾ?

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಡಾ. ರಾಜಕುಮಾರ್ ಅವರಿಗೆ, ಅವರದೇ ಆದ ಸ್ಥಾನಮಾನ ಮತ್ತು ಅಭಿಮಾನಿಗಳ ಬಳಗ ಇದೆ. ರಾಜಕುಮಾರ ನಟನೆಗೆ ಮನಸೋಲದವರಿಲ್ಲ.

ಹೌದು, ಡಾ. ರಾಜ್ ಕುಮಾರ್ ಮಾತ್ರವಲ್ಲದೆ ಇಡೀ ಕುಟುಂಬದವರು ಅಂದರೆ, ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್, ಸೇರಿದಂತೆ ಎಲ್ಲರೂ ನಟನೆಯಲ್ಲಿ ತಮ್ಮದೇ ಆದ ಚಾಪೂ ಮುಗಿಸಿದ್ದಾರೆ.

ಅದರಂತೆ ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವರಾಜ್ ಕುಮಾರ್ ಅವರು ಕೂಡ ನಮ್ಮ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪೂ ಮೂಡಿಸಿದ್ದಾರೆ.

ಯೆಸ್…ನಟ ಯುವರಾಜ್ ಕುಮಾರ್ ಅವರು ತಮ್ಮನಟನೆಯ ಮೂಲಕವೇ ಅಭಿಮಾನಿಗಳ ಬಳಗವನ್ನು ಗಳಿಸಿದ್ದಾರೆ. ಇನ್ನು ಡಾ. ರಾಜಕುಮಾರ್ ಅವರ ಕುಟುಂಬದಲ್ಲಿ ಇದೀಗ ಬಿರುಕು ಮೂಡಿದೆ.

ಯುವರಾಜ್ ಕುಮಾರ್ ಅವರು ತಮ್ಮ ಪತ್ನಿ ಶ್ರೀದೇವಿ ಅವರಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಈಗಾಗಲೇ ಕುಟುಂಬ ನ್ಯಾಯಾಲದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಯುವರಾಜ್ ಕುಮಾರ್ ಮತ್ತು ಪತ್ನಿ ಶ್ರೀದೇವಿಯವರ ಕುಟುಂಬದಲ್ಲಿ ಬಿರುಕು ಮೂಡಲು ಕಾರಣವೇನೆಂದು ಎಲ್ಲಾ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಇವರಿಬ್ಬರ ಕುಟುಂಬದಲ್ಲಿ ಬಿರುಕು ಮೂಡಲು ಮೂಲ ಕಾರಣವೆಂದರೆ, ನಟ ಯುವರಾಜ್ ಕುಮಾರ್ ಅವರು ಪ್ರಸಿದ್ಧ ನಟಿ ಜೊತೆ ಯುವರಾಜ್ ಕುಮಾರ್ ಅವರು ಆಪ್ತತೆಯನ್ನು ಹೆಚ್ಚಿಸಿಕೊಂಡಿದ್ದೆ ಇದಕ್ಕೆ ಮೂಲ ಕಾರಣ ಎಂದು ತಿಳಿದು ಬರುತ್ತಿದೆ.

ಮನಸ್ತಾಪ ಹೆಚ್ಚಿದ ಬಳಿಕ ಶ್ರೀದೇವಿ ಅವರು ವಿದೇಶಕ್ಕೆ ತೆರಳಿದರು. ಕಳೆದ ಕೆಲವು ತಿಂಗಳಿಂದ ಅವರು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಯುವ ರಾಜ್​ಕುಮಾರ್​ ನಟಿಸಿದ ‘ಯುವ’ ಸಿನಿಮಾ ಈ ವರ್ಷ ಬಿಡುಗಡೆ ಆಯಿತು. ಆ ಸಿನಿಮಾಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳಲ್ಲೂ ಪತ್ನಿ ಶ್ರೀದೇವಿ ಕಾಣಿಸಿಕೊಳ್ಳಲೇ ಇಲ್ಲ. ಆಗಲೂ ಕೂಡ ಬಹುತೇಕರಿಗೆ ಅನುಮಾನ ಮೂಡಿತ್ತು. ಇದನ್ನೂ ಓದಿ: ವಿಚ್ಛೇದನಕ್ಕೆ ಕೋರ್ಟ್ ಮೆಟ್ಟಿಲೇರಿದ ಡಾ. ರಾಜ್ ಕುಟುಂಬದ ಕುಡಿ

ಮೂಲಗಳ ಪ್ರಕಾರ, ಯುವ ರಾಜ್​ಕುಮಾರ್​ ಅವರು ಕನ್ನಡ ಚಿತ್ರರಂಗದ ಖ್ಯಾತ ನಟಿಯೊಬ್ಬರ ಜೊತೆ ಸ್ನೇಹ ಬೆಳೆಸಿಕೊಂಡಿದ್ದಾರೆ. ಆ ನಟಿಯ ಜೊತೆ ಯುವ ಆಪ್ತತೆ ಹೆಚ್ಚಾಯಿತು. ಆ ಕಾರಣದಿಂದಲೇ ಅವರ ಸಂಸಾರದಲ್ಲಿ ಸಮಸ್ಯೆ ಶುರುವಾಗಿರುವ ಸಾಧ್ಯತೆ ದಟ್ಟವಾಗಿದೆ. ಸದ್ಯಕ್ಕೆ ಶ್ರೀದೇವಿ ಅವರು ವಿಚ್ಛೇದನದ ಕುರಿತಂತೆ ಪ್ರತಿಕ್ರಿಯೆ ನೀಡುವುದು ಬಾಕಿಯಿದೆ. ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

 

Related