ಮೈಸೂರು-ಕೊಡಗು ರೈಲ್ವೆ ಉನ್ನತೀಕರಣಕ್ಕೆ ಬದ್ಧ: ಯದುವೀರ್

ಮೈಸೂರು-ಕೊಡಗು ರೈಲ್ವೆ ಉನ್ನತೀಕರಣಕ್ಕೆ ಬದ್ಧ: ಯದುವೀರ್

ಬೆಂಗಳೂರು: ಲೋಕಸಭಾ ಚುನಾವಣೆ 2024ನೇ ಸಾಲಿನಲ್ಲಿ ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮೈಸೂರಿನ ರಾಜರಾದ ಯದುವೀರ್ ಒಡೆಯರ್ ಅವರು ಬಹುಮತದಲ್ಲಿ ಗೆದ್ದಿದ್ದಾರೆ.

ಮೈಸೂರು-ಕೊಡಗು ವಿಭಾಗದ ಜನತೆ ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಸಂಸದರಾಗಿ ಆಯ್ಕೆ ಮಾಡಿದ್ದಾರೆ ಹಾಗಾಗಿ ನಾನು ಜನರ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಮೈಸೂರು ರೈಲ್ವೆ ವಿಭಾಗದ ಡಿಆರ್​ಎಂ ಶಿಲ್ಪಿ ಅಗರ್ವಾಲ್, ಹಾಗೂ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ಮಾಡಿರುವ ಅವರು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರೈಲ್ವೇ ಒಂದು ಪ್ರಮುಖ ಸಾರಿಗೆ ಸಾಧನವಾಗಿದೆ. ರೈಲ್ವೆ ಉನ್ನತೀಕರಣಕ್ಕೆ ಬದ್ಧ ಎಂದು ಕೊಡಗು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ. ಇದನ್ನೂ ಓದಿ: ಜಿಲ್ಲಾ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಿಎಂ

ಪ್ರಯಾಣಿಕರು ತಮ್ಮ ಪ್ರಯಾಣದ ಅನುಭವವನ್ನು ಆನಂದಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ ಮತ್ತು ಆ ಅನುಭವವನ್ನು ಉನ್ನತೀಕರಿಸಲು ನಾನು ಬದ್ಧನಾಗಿದ್ದೇನೆ. ರೈಲ್ವೆಯೊಂದಿಗೆ ನಿಕಟವಾಗಿ ಕೆಲಸ ಮಾಡಲು ಸಿದ್ದ ಎಂದಿದ್ದಾರೆ.

Related