ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ: ಡಿಕೆಶಿ

ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ: ಡಿಕೆಶಿ

ಬೆಂಗಳೂರು : ಕೋವಿಡ್ ಲಸಿಕೆ ಅಭಿಯಾನದ ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರವೇ ಭರಿಸಬೇಕು. ರಾಜ್ಯ ಸರ್ಕಾರ ತನ್ನಲ್ಲಿರುವ ಹಣವನ್ನು ಲಾಕ್‌ಡೌನ್ ನಿಂದ ನಷ್ಟು, ಸಂಕಷ್ಟ ಅನುಭವಿಸಿದವರಿಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಖರ್ಚು ವೆಚ್ಚಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಕೇಂದ್ರ ಸರ್ಕಾರ ತನ್ನ ಹಣದಲ್ಲೇ ದೇಶಾದ್ಯಂತ ಪೋಲೀಯೋ ಅಭಿಯಾನವನ್ನು ನಡೆಸಿದೆ. ಈಗಿನ ಸರ್ಕಾರ ಅದೇ ಮಾದರಿಯಲ್ಲಿ ಕೋವಿಡ್ ಲಸಿಕೆ ಅಭಿಯಾನವನ್ನು ನಡೆಸಬೇಕು. ವಿಶ್ವದ ಎಲ್ಲಾ ರಾಷ್ಟ್ರಗಳು ತಮ್ಮ ಖರ್ಚಿನಲ್ಲೇ ಲಸಿಕೆ ಹಾಕಿಸುತ್ತಿವೆ. ಮೋದಿ ಅವರ ಸರ್ಕಾರ ಮಾತ್ರ 45 ವರ್ಷಕ್ಕಿಂತ ಕೆಳಗಿನವರಿಗೆ ರಾಜ್ಯ ಸರ್ಕಾರಗಳೇ ಲಸಿಕೆ ಖರೀದಿಸಿಕೊಡಬೇಕು ಎಂದು ಹೇಳಿ ಜವಾಬ್ದಾರಿಯಿಂದ ನುಣಚಿಕೊಂಡಿದೆ ಎಂದು ಕಿಡಿಕಾರಿದರು.

ಮೊದಲನೇ ಡೋಸ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಪೂರೈಕೆ ಮಾಡಲಾಗದ ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ಎಷ್ಟು ಲಸಿಕೆ ಪೂರೈಕೆಯಾಗುತ್ತಿದೆ ಎಂದು ಗೋತ್ತಿತ್ತು. ಆದರೂ ಮುಖ್ಯಮಂತ್ರಿ ಯಡಿಯೂರಪ್ಪ ಬೋರಿಂಗ್ ಆಸ್ಪತ್ರೆಯಲ್ಲಿ ಒಂದು ಹುಡುಗಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಲಸಿಕೆ ಹಾಕಿದಿ ಉದ್ಘಾಟಿಸಿದರು.

ರಾಜ್ಯದಿಂದ ಗೆದ್ದಿರುವ ಬಿಜೆಪಿಯ 25 ಸಂಸದರಿಗೆ ಕೇಂದ್ರ ಸರ್ಕಾರದ ಬಳಿ ಹೋಗಿ ಮಾತನಾಡಲು ತಾಕತ್ತಿಲ್ಲ. ಡಬಲ್ ಇಂಜಿನ್ ಸರ್ಕಾರ ಬಂದರೆ ರಾಜ್ಯಕ್ಕೆ ಭಾರೀ ಅನುಕೂಲವಾಗಲಿದೆ ಎಂದು ಪ್ರಚಾರ ಮಾಡಿದರು. ಇಲ್ಲಿ ಡಬಲ್ ಇಂಜಿನ್ ಸರ್ಕಾರ ನಿಂತು ಹೋಗಿದೆ.

ಸಿಂಗಲ್ ಇಂಜಿನ್ ಸರ್ಕಾರವಾಗಿ. ಆಮ್ಲಜನಕದ ವಿಷಯದಲ್ಲಿ ಹೈಕೋರ್ಟ್ ಆದೇಶ ನೀಡಿದ್ದರಿಂದ ಸಾಕಷ್ಟು ಪೂರೈಕೆಯಾಗಿದೆ. ಅದನ್ನು ಪ್ರಧಾನಿ ಮೋದಿ ಅವರೇ ಪೂರೈಕೆ ಮಾಡುತ್ತಿದ್ದಾರೆ ಎಂದು ಕೆಲವರು ಬಿಂಬಿಸುತ್ತಿದ್ದಾರೆ. ಲಸಿಕೆ ವಿಷಯದಲ್ಲೂ ಅನ್ಯಾಯವಾಗಿದೆ. ಇವರಿಗೆ ಯಾವುದನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.

ಲಸಿಕೆಗೆ ಕೇಂದ್ರ ಸರ್ಕಾರವೇ ಹಣ ಖರ್ಚು ಮಾಡಬೇಕು. ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಲಾಕ್‌ಡೌನ್ ನಿಂದ ನಷ್ಟ ಅನುಭವಿಸಿದ ಹಣ್ಣು ತರಕಾರಿ, ಹೂ ಬೆಳೆಗಾರರ ನಷ್ಟ ಅನುಭವಿಸಿದವರಿಗೆ ಕೊಡಬೇಕು. ವೃತ್ತಿ ಆಧರಿತ ಜನರಿಗೆ ತಲಾ 10 ಸಾವಿರ ನೀಡಿ ಸಂಕಷ್ಟ ಸಮಯದಲ್ಲಿ ನೆರವಾಗಬೇಕು ಎಂದು ಒತ್ತಾಯಿಸಿದರು.

Related