ಸಂವಿಧಾನ ರಚನೆ ಹರಿಕಾರ ಅಂಬೇಡ್ಕರ್

ಸಂವಿಧಾನ ರಚನೆ ಹರಿಕಾರ ಅಂಬೇಡ್ಕರ್

ತಾಳಿಕೋಟೆ: ವಿಶ್ವದಲ್ಲಿ ಭಾರತ ದೇಶ ಶ್ರೇಷ್ಠ ಸಂವಿಧಾನ ಹೊಂದಿದ ದೇಶವಾಗಿದೆ. ಅಂತಹ ಸಂವಿಧಾನವನ್ನು ನಮಗೆ ಕೊಟ್ಟಿರುವ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಮಹಾ ಪುರುಷರಾಗಿದ್ದಾರೆ. ಅವರು ಜೀವನದಲ್ಲಿ ಅನುಭವಿಸಿದ ಸಂಕಷ್ಟಗಳು ಹಾಗೂ ಸಾಧನೆಗಳು ನಮ್ಮೆಲ್ಲರಿಗೂ ಮಾರ್ಗದರ್ಶನಗಳಾಗಿವೆ ಎಂದು ಎಸ್.ಕೆ. ಕಾಲೇಜಿನ ಪ್ರಾಧ್ಯಾಪಕಿ ಡಾ. ಸುಜಾತಾ ಚಲವಾದಿ ಹೇಳಿದರು.

ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 130ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದೆ. ಒಬ್ಬೊಬ್ಬ ಸಾಧಕರು ಹಾಗೂ ಹಲವಾರು ಪುಣ್ಯ ಪುರುಷರು ನಮಗಾಗಿ ಬಿಟ್ಟು ಹೊಗಿರುವ ಆದರ್ಶ ತತ್ವಗಳನ್ನು ಹಾಗೂ ಸಂಸ್ಕೃತಿ ನಮ್ಮದಾಗಿಸಿಕೊಂಡು ಸಮಾಜದಲ್ಲಿ ಎಲ್ಲರೂ ಶಾಂತಿಯುತ ಸಮಾಜ ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.

 

Related