ಸಂತೋಷ್ ಲಾಡ್ ಸಿಎಂ ಸಚಿವಾಲಯ ಅಧಿಕಾರಿಗಳ ನಡುವೆ ಸಂಘರ್ಷ!?

ಸಂತೋಷ್ ಲಾಡ್ ಸಿಎಂ ಸಚಿವಾಲಯ ಅಧಿಕಾರಿಗಳ ನಡುವೆ ಸಂಘರ್ಷ!?

ಬೆಂಗಳೂರು: ಸಚಿವ ಸಂತೋಷ್ ಲಾಡ್ ಅವರ ಶಿಫಾರಸುಗಳನ್ನೇ ಕಸದ ಬುಟ್ಟಿಗೆ ಹಾಕಿರುವ ಸಿಎಂ ಸಚಿವಾಲಯದ ಅಧಿಕಾರಿಗಳು, ಸಚಿವರಿಗೇ ಮಾಹಿತಿ ನೀಡದೇ ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿದ್ಧಪಡಿಸಿದ್ದಾರೆ. ಇದು ಸಂತೋಷ್ ಲಾಡ್ ಹಾಗೂ ಸಿಎಂ ಸಚಿವಾಲಯ ಅಧಿಕಾರಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ಸಚಿವರ ಹೆಸರಲ್ಲಿ ತಾವೇ ಅಧಿಕಾರ ಚಲಾಯಿಸುತ್ತಿರುವ ಸಿಎಂ ಸಚಿವಾಲಯದ ಅಧಿಕಾರಿಗಳ ಅಬ್ಬರಕ್ಕೆ ತೀವ್ರ ಕೋಪಗೊಂಡಿರುವ ಸಚಿವ ಸಂತೋಷ್ ಲಾಡ್, ಅತ್ತ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಲೂ ಆಗದೇ, ಸುಮ್ಮನಿರಲೂ ಆಗದೇ ಇರುವ ಸ್ಥಿತಿಯಲ್ಲಿ ಕುಳಿತಿದ್ದಾರೆ. ಅಲ್ಲದೆ, ವರ್ಗಾವಣೆ ಮಾಡಿರುವ ಅಧಿಕಾರಿಗಳ ಸೇವಾ ವಿವರ ನೀಡುವಂತೆ ಟಿಪ್ಪಣಿ ಕಳಿಸಿದ್ದಾರೆ.

 

Related